ನೋಡಲು ಮರೆಯದಿರಿ… ಇದು ‘ಪೊಗರು’ ಹವಾ

Date:

ಕನ್ನಡ ಸಿನಿಮಾಗಳು ಸದ್ದು ಮಾಡಬೇಕು, ಆಗಲೇ ಚಿತ್ರರಂಗವೂ ಸದ್ದು ಮಾಡೋದು… ಕೋವಿಡ್ ನಂತರ ‘ಪೊಗರು’ ಅಬ್ಬರಿಸಿದೆ‌‌… ಕೊಟ್ಟ ಕಾಸು ಒಂದು ಪೈಸೆ ನಷ್ಟವಾಗದ ಹಾಗೆ ಸಿನಿಮಾ ಕಟ್ಟಕೊಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್… ಸಿನಿಮಾದ ಹೀರೋ ಅಂದ ಮಾತ್ರಕ್ಕೆ ಸ್ಟೈಲಾಗಿ ಏರೋಪ್ಲೇನಿಂದ ಇಳೀಬೇಕು ಅನ್ನೋರ ಮಧ್ಯೆ ಪಾತ್ರಕ್ಕೆ ಹೊಂದಿಕೊಂಡು ಇಡೀ ಸಿನಿಮಾದಲ್ಲಿ ರಗಡ್ ಆಗಿ ಛಾಪು ಮೂಡಿಸಿದ್ದಾರೆ ಧೃವಾ ಸರ್ಜಾ… ಇಡೀ ಸಿನಿಮಾದ ಜೀವವಾಗಿ, ಜೀವಾಳವಾಗಿ ತನ್ನ ಹೆಗಲ ಮೇಲೆ ಇಡೀ ಸಿನಿಮಾ ಹೊತ್ತಿದ್ದಾರೆ… ಸಿನಿಮಾಗೋಸ್ಕರ ಅವರ ಡೆಡಿಕೇಶನ್ ನೋಡಿದ್ರೆ ಖುಷಿಯಾಗುತ್ತೆ.‌..

ಬರೀ ಮಾಸ್ ಅಂತ ಅಂದುಕೊಂಡರೆ ಅದು ತಪ್ಪಾಗುತ್ತೆ… ಸಖತ್ ಸಂಭಾಷಣೆಯ ಜೊತೆ ನಗೆಗಡಲಲ್ಲಿ ತೇಲಿಸೋ ಕಾಮಿಡಿ ಇದೆ, ಸಂಬಂಧಗಳನ್ನು ಜೀವಂತವಾಗಿಡೋ ಎಮೋಶನಲ್ ಸೀನ್‌ಗಳಿದೆ..‌ ಗಟ್ಟಿಯಾದ ನಿರೂಪಣೆ ಇದೆ… ಕಣ್ಣಿಗೆ ಹಬ್ಬ ಅನ್ನುವಂತಹ ಹಾಡುಗಳಿವೆ… ಫೈಟ್ಸ್ ಅಂತೂ ಸಖತ್ ಮಾಸ್… ಇದು ಪೊಗರು ಹವಾ…

ರಶ್ಮಿಕಾ ಮುದ್ದು ಮುದ್ದು ಅನ್ನಿಸ್ತಾರೆ , ಚಿಕ್ಕಣ್ಣ, ಕುರಿ ಪ್ರತಾಪ್ ಕಚಗುಳಿ ಇಡ್ತಾರೆ…ರವಿಶಂಕರ್, ಪವಿತ್ರ ಲೋಕೇಶ್ ಸಖತ್ ಇಷ್ಟವಾಗ್ತಾರೆ…ಧನಂಜಯ್ ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಅನ್ಸುತ್ತೆ… ಟೋಟಲಿ ಸಕತ್ ಇಷ್ಟವಾಗುತ್ತೆ…

ಚಂದನ್ ಶೆಟ್ಟಿ ಹಾಡುಗಳು, ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಸಿನಿಮಾದ ಮತ್ತೊಂದು ಕಿಕ್… ಟೋಟಲಿ ಪ್ರೇಕ್ಷಕರ ಪಾಲಿಗೆ ‘ಪೊಗರು’ ಫುಲ್ ಮೀಲ್ಸ್… ಕುಟುಂಬ ಸಮೇತ ಹೋಗಿ… ಪ್ರತಿಯೊಬ್ಬರಿಗೂ ಇಷ್ಟವಾಗುವ ಸಿಕ್ಕಾಪಟ್ಟೆ ತಾಕತ್ತಿರೋ ಸಿನಿಮಾ ‘ಪೊಗರು’…

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...