ಬಿಗ್ ಬಾಸ್ ಮನೆಯಲ್ಲಿದ್ದೇ ರಾಜೀವ್ ಅದೆಂಥಾ ಕೆಲಸ ಮಾಡಿದ್ರು!

Date:

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಗಳ ಪೈಕಿ ರಾಜೀವ್ ಕೂಡ ಒಬ್ಬರು. ಎಲ್ಲರೂ ಗಮನಿಸಿರುವ ಹಾಗೆ ರಾಜೀವ್ ಕೊಂಚ ಉದ್ದ ತಲೆಗೂದಲನ್ನು ಬಿಟ್ಟಿದ್ದರು. ರಾಜೀವ್ ತಲೆಗೂದಲ ಮೇಲೆ ಎಲ್ಲರ ಕಣ್ಣಿತ್ತು. ಇದೀಗ ಏಕಾಏಕಿ ತಮ್ಮ ತಲೆಗೂದಲಿಗೆ ರಾಜೀವ್ ಕತ್ತರಿ ಹಾಕಿದ್ದಾರೆ.

ಅರವಿಂದ್ ಹಾಗೂ ಮಂಜು ಪಾವಗಡ ಸೇರಿ ರಾಜೀವ್‌ಗೆ ಹೇರ್‌ಕಟ್ ಮಾಡಿದ್ದಾರೆ. ರಾಜೀವ್‌ಗೆ ಹೊಸ ಹೇರ್‌ಸ್ಟೈಲ್ ನೀಡಿದ್ದಾರೆ. ಅಷ್ಟಕ್ಕೂ, ರಾಜೀವ್ ದಿಢೀರ್ ಅಂತ ಹೇರ್‌ಕಟ್ ಮಾಡಿಸಿಕೊಂಡಿದ್ದು ಯಾಕೆ.? ಈ ಪ್ರಶ್ನೆಗೆ ಕಿಚ್ಚ ಸುದೀಪ್ ಮುಂದೆ ರಾಜೀವ್ ಉತ್ತರ ಕೊಟ್ಟಿದ್ದಾರೆ.

”ಒಬ್ಬ ಕ್ಯಾನ್ಸರ್ ಪೇಷೆಂಟ್‌ಗೆ ಕೂದಲು ಕೊಡಬೇಕು ಅಂತ ಅಂದುಕೊಂಡಿದ್ದೆ. ಅದು ನಿಮ್ಮ ಮುಖಾಂತರ ಅವರಿಗೆ ತಲುಪಲಿ. ಎರಡುವರೆ ವರ್ಷದಿಂದ ಕೂದಲು ಬೆಳೆಸಿದ್ದೆ. ಅದು ಅವರಿಗೆ ತಲುಪಿದರೆ ಖುಷಿ ಇರುತ್ತದೆ” ಎಂದು ಸುದೀಪ್‌ಗೆ ರಾಜೀವ್ ಹೇಳಿದರು.

ಕ್ಯಾನ್ಸರ್ ಪೇಷೆಂಟ್‌ಗೆ ತಲೆಗೂದಲು ತಲುಪಿಸುವುದಾಗಿ ಕಿಚ್ಚ ಸುದೀಪ್ ಒಪ್ಪಿಕೊಂಡರು. ರಾಜೀವ್ ಕೈಗೊಂಡ ಈ ಒಳ್ಳೆಯ ನಡೆ ಕಿಚ್ಚ ಸುದೀಪ್‌ಗೆ ಇಷ್ಟವಾಯಿತು. ಇತರೆ ಸ್ಪರ್ಧಿಗಳೂ ರಾಜೀವ್‌ಗೆ ಭೇಷ್ ಎಂದರು.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...