ಬ್ಲಾಕ್ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ

Date:

ಬ್ಲಾಕ್ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ

 

ಬ್ಲಾಕ್ ಕಾಫಿ ಸಾಮಾನ್ಯ ಪಾನೀಯವಾಗಿದ್ದರೂ, ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಹಾಲು ಅಥವಾ ಸಕ್ಕರೆ ಸೇರಿಸದೆ ಕುಡಿಯುವ ಬ್ಲಾಕ್ ಕಾಫಿ ದೇಹಕ್ಕೆ ಪೌಷ್ಟಿಕಾಂಶ ನೀಡುವುದಲ್ಲದೆ ಹಲವಾರು ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.

ಪೌಷ್ಟಿಕಾಂಶಗಳು

ಬ್ಲಾಕ್ ಕಾಫಿಯಲ್ಲಿ ವಿಟಮಿನ್ B2, B3, ಮೆಗ್ನೇಷಿಯಮ್, ಪೊಟ್ಯಾಸಿಯಮ್ ಮತ್ತು ಫೀನಾಲಿಕ್ ರಾಸಾಯನಿಕಗಳು ಹೇರಳವಾಗಿವೆ. ಹಾಲು ಮತ್ತು ಸಕ್ಕರೆ ಇಲ್ಲದ ಕಾರಣ, ಇದು ಕೊಬ್ಬು, ಕಾರ್ಬೋಹೈಡ್ರೇಟ್ ಅಥವಾ ಪ್ರೋಟೀನ್ಗಳನ್ನು ಹೊಂದಿರುವುದಿಲ್ಲ.

ಯಕೃತ್ತಿನ ಆರೋಗ್ಯ

ಬ್ಲಾಕ್ ಕಾಫಿ ನಿಯಮಿತ ಸೇವನೆಯಿಂದ ಯಕೃತ್ತಿನ ಕೊಬ್ಬು ಕಡಿಮೆಯಾಗುತ್ತದೆ.
ರಕ್ತದಲ್ಲಿನ ವಿಷಕಾರಿ ಪಿತ್ತಜನಕಾಂಗದ ಕಿಣ್ವಗಳ ಮಟ್ಟ ಕಡಿಮೆಯಾಗುತ್ತದೆ.
ಕ್ಯಾನ್ಸರ್, ಹೆಪಟೈಟಿಸ್, ಕೊಬ್ಬಿನ ಯಕೃತ್ತು ಮತ್ತು ಆಲ್ಕೊಹಾಲಿಕ್ ಸಿರೋಸಿಸ್ ಮುಂತಾದ ಗಂಭೀರ ಕಾಯಿಲೆಗಳನ್ನು ತಡೆಯುವಲ್ಲಿ ಸಹಾಯಕ.
ದಿನಕ್ಕೆ 4 ಕಪ್ ಬ್ಲಾಕ್ ಕಾಫಿ ಕುಡಿಯುವವರು ಶೇ. 80 ರಷ್ಟು ಲಿವರ್ ಸಮಸ್ಯೆಗಳಿಂದ ಪಾರಾಗುತ್ತಾರೆ ಎಂದು ಅಧ್ಯಯನಗಳು ಸೂಚಿಸಿವೆ.

ಮೆದುಳಿನ ಆರೋಗ್ಯ

ಬ್ಲಾಕ್ ಕಾಫಿಯಲ್ಲಿ ಇರುವ ಕೆಫೀನ್ ನರಮಂಡಲವನ್ನು ಉತ್ತೇಜಿಸಿ, ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ.
ಜ್ಞಾಪಕಶಕ್ತಿಯನ್ನು (Memory Power) ಹೆಚ್ಚಿಸುತ್ತದೆ.
ಆಲ್ಝೈಮರ್ಸ್, ಡಿಮೆನ್ಶಿಯಾ ಮತ್ತು ಪಾರ್ಕಿನ್ಸನ್ಸ್‌ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ತೂಕ ಇಳಿಕೆ

ಕಡಿಮೆ ಕ್ಯಾಲೊರಿಯ ಪಾನೀಯವಾಗಿರುವ ಬ್ಲಾಕ್ ಕಾಫಿ ಚಯಾಪಚಯವನ್ನು ವೇಗಗೊಳಿಸುತ್ತದೆ.
ದೇಹದಲ್ಲಿ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಹಸಿವನ್ನು ನಿಯಂತ್ರಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿ.

ದೇಹದ ವಿಷಕಾರಿ ಅಂಶ ನಿವಾರಣೆ

ಬ್ಲಾಕ್ ಕಾಫಿ ಒಂದು ಮೂತ್ರವರ್ಧಕ ಪಾನೀಯ (Diuretic).
ನಿಯಮಿತ ಸೇವನೆಯಿಂದ ದೇಹದಲ್ಲಿನ ಬೇಡದಿರುವ ವಿಷಕಾರಿ ಅಂಶಗಳು ಮತ್ತು ಬ್ಯಾಕ್ಟೀರಿಯಾಗಳು ಮೂತ್ರದ ಮೂಲಕ ಹೊರ ಹೋಗುತ್ತವೆ.

ಹೃದಯದ ಆರೋಗ್ಯ

ಪ್ರತಿದಿನ 1–2 ಕಪ್ ಬ್ಲಾಕ್ ಕಾಫಿ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ದೇಹದಲ್ಲಿ ಉರಿಯೂತವನ್ನು ತಡೆದು, ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...