ಮಸೀದಿ ಮಂದಿರದ ಬಾಗಿಲಲಿ

Date:

ಮಸೀದಿ ಮಂದಿರದ ಬಾಗಿಲಲಿ

ಎತ್ತ ನೋಡಲಿ ಜಗದ ಕತ್ತಲು
ಸುತ್ತಲೂ ಸುತ್ತುತಿಹುದು
ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು
ಮೀಸೆ ಇಲ್ಲದ ಗಡ್ಡವು
ಹೊಸ ಪಕ್ಷದ ಪೋಷಾಕು ತೊಟ್ಟಿಹುದು
ಏನಿದೇನಿದು.. ರಣರಂಗವೋ – ಸಂಗದಿ ಸಂಧಿಸಿಹ
ಗುಲಾಮಗಿರಿಯ ಹೋರಾಟವೋ ನಾನರಿಯೆ.
ಚೂರಿ ಇರಿದವ ರಂಗನಾದರೆ
ತುಪಾಕಿ ಹಿಡಿದವ ರಹೀಮನೆಂಬ
ಪಟ್ಟ ಕಟ್ಟಿಹರು ಓ ಕಾವ್ಯದತ್ತ
ಎತ್ತ ಸಾಗುತಿದೆ ಈ ಜಗದ ಚಿತ್ತ
ಶ್ರೀಮಂತನ ಮನೆಯ ಗುದ್ದಲಿ ಪೂಜೆಗೆ
ರಾಮ-ರಹೀಮರ ಬಲಿ ಕೊಡಬೇಕೇ..?
ಹೋರಾಡುವ ಸಮಚಿತ್ತದಿ
ಮಸೀದಿಯ-ದೇಗುಲದ ರಕ್ತ ಒಂದೇ
ಸಂಯುತ್ತವಾಗಿ ಸಮಸ್ಯೆಯ ಶಿಖರವ
ಪುಡಿಗೈಯುವ ವಿಶ್ವಮಾನವತೆಯ
ಮಂತ್ರವ ಬಿಗಿದಪ್ಪುವ.⭐
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...