ಮಸೀದಿ ಮಂದಿರದ ಬಾಗಿಲಲಿ

Date:

ಮಸೀದಿ ಮಂದಿರದ ಬಾಗಿಲಲಿ

ಎತ್ತ ನೋಡಲಿ ಜಗದ ಕತ್ತಲು
ಸುತ್ತಲೂ ಸುತ್ತುತಿಹುದು
ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು
ಮೀಸೆ ಇಲ್ಲದ ಗಡ್ಡವು
ಹೊಸ ಪಕ್ಷದ ಪೋಷಾಕು ತೊಟ್ಟಿಹುದು
ಏನಿದೇನಿದು.. ರಣರಂಗವೋ – ಸಂಗದಿ ಸಂಧಿಸಿಹ
ಗುಲಾಮಗಿರಿಯ ಹೋರಾಟವೋ ನಾನರಿಯೆ.
ಚೂರಿ ಇರಿದವ ರಂಗನಾದರೆ
ತುಪಾಕಿ ಹಿಡಿದವ ರಹೀಮನೆಂಬ
ಪಟ್ಟ ಕಟ್ಟಿಹರು ಓ ಕಾವ್ಯದತ್ತ
ಎತ್ತ ಸಾಗುತಿದೆ ಈ ಜಗದ ಚಿತ್ತ
ಶ್ರೀಮಂತನ ಮನೆಯ ಗುದ್ದಲಿ ಪೂಜೆಗೆ
ರಾಮ-ರಹೀಮರ ಬಲಿ ಕೊಡಬೇಕೇ..?
ಹೋರಾಡುವ ಸಮಚಿತ್ತದಿ
ಮಸೀದಿಯ-ದೇಗುಲದ ರಕ್ತ ಒಂದೇ
ಸಂಯುತ್ತವಾಗಿ ಸಮಸ್ಯೆಯ ಶಿಖರವ
ಪುಡಿಗೈಯುವ ವಿಶ್ವಮಾನವತೆಯ
ಮಂತ್ರವ ಬಿಗಿದಪ್ಪುವ.⭐
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...