ಮಸೀದಿ ಮಂದಿರದ ಬಾಗಿಲಲಿ

Date:

ಮಸೀದಿ ಮಂದಿರದ ಬಾಗಿಲಲಿ

ಎತ್ತ ನೋಡಲಿ ಜಗದ ಕತ್ತಲು
ಸುತ್ತಲೂ ಸುತ್ತುತಿಹುದು
ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು
ಮೀಸೆ ಇಲ್ಲದ ಗಡ್ಡವು
ಹೊಸ ಪಕ್ಷದ ಪೋಷಾಕು ತೊಟ್ಟಿಹುದು
ಏನಿದೇನಿದು.. ರಣರಂಗವೋ – ಸಂಗದಿ ಸಂಧಿಸಿಹ
ಗುಲಾಮಗಿರಿಯ ಹೋರಾಟವೋ ನಾನರಿಯೆ.
ಚೂರಿ ಇರಿದವ ರಂಗನಾದರೆ
ತುಪಾಕಿ ಹಿಡಿದವ ರಹೀಮನೆಂಬ
ಪಟ್ಟ ಕಟ್ಟಿಹರು ಓ ಕಾವ್ಯದತ್ತ
ಎತ್ತ ಸಾಗುತಿದೆ ಈ ಜಗದ ಚಿತ್ತ
ಶ್ರೀಮಂತನ ಮನೆಯ ಗುದ್ದಲಿ ಪೂಜೆಗೆ
ರಾಮ-ರಹೀಮರ ಬಲಿ ಕೊಡಬೇಕೇ..?
ಹೋರಾಡುವ ಸಮಚಿತ್ತದಿ
ಮಸೀದಿಯ-ದೇಗುಲದ ರಕ್ತ ಒಂದೇ
ಸಂಯುತ್ತವಾಗಿ ಸಮಸ್ಯೆಯ ಶಿಖರವ
ಪುಡಿಗೈಯುವ ವಿಶ್ವಮಾನವತೆಯ
ಮಂತ್ರವ ಬಿಗಿದಪ್ಪುವ.⭐
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...