ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಂತೆ ರಾಜಕೀಯ ರಂಗದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆಗಳು ಆಗುತ್ತಿವೆ. ಪ್ರಮುಖ ಪಕ್ಷಗಳು ಜೋರಾಗಿ ತಯಾರಿ ನಡೆಸುತ್ತಿವೆ. ಈ ನಡುವೆ ಸಿನಿಮಾ ಕ್ಷೇತ್ರದಿಂದ ಕೆಲವರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷಕಟ್ಟಿದ್ದು, ರಾಜ್ಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಪಕ್ಷದ ಮೂಲಕ ರಾಜಕೀಯಕ್ಕೆ ಪರ್ಯಾಯವಾಗಿ ಪ್ರಜಾಕೀಯ ಕಲ್ಪನೆ ಮುಖಾಂತರ ರಾಜಕೀಯ ರಂಗಕ್ಕೆ ಎಂಟ್ರಿಕೊಟ್ಟಿರೋದು ಈಗ ಹಳೆ ಸುದ್ದಿ.
ಲೇಟೆಸ್ಟ್ ನ್ಯೂಸ್ ಅಂದ್ರೆ ಇನ್ನೊಬ್ಬ ಕನ್ನಡದ ನಿರ್ದೇಶಕ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಅವರಾರು…? ಅವರ ಪಕ್ಷದ ಹೆಸರೇನು ಎಂಬ ಎಕ್ಸ್ ಕ್ಲ್ಯೂಸಿವ್ ಮಾಹಿತಿಯನ್ನು ನಿಮಗೆ ಕೊಡ್ತೀವಿ… ರಾತ್ರಿ 9ಗಂಟೆಗೆ… ನಮ್ಮೊಂದಿಗೆ ಆ ನಿರ್ದೇಶಕ ಕಮ್ ರಾಜಕಾರಣಿ ಫೇಸ್ ಬುಕ್ ಲೈವ್ ನಲ್ಲಿ ಬರ್ತಿದ್ದಾರೆ.