ಯೂಟ್ಯೂಬ್​ನಲ್ಲಿ ಸೈನ್ಸ್ ಟ್ರೆಂಡ್​ ಸೆಟ್​ ಮಾಡೋಕೆ ರೆಡಿಯಾದ್ರು ರಾಮಚಂದ್ರ ಮೇಷ್ಟ್ರು..!

Date:

ಯೂಟ್ಯೂಬ್​.. ಟಾಪ್ 1 ಸೋಶಿಯಲ್ ಮೀಡಿಯಾ..! ಗಾಸಿಪ್​ಗಳನ್ನು ಹಬ್ಬಿಸೋರಿಗಂತೂ ಬಹುದೊಡ್ಡ ವೇದಿಕೆಯಾಗಿದೆ. ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗೋಕೆ ಶುರುವಾದ್ಮೇಲೆ, Suscribers ಹೆಚ್ಚಾದಂತೆ ವೋನ್ ಕಂಟೆಂಟ್ ವಿಡಿಯೋಗಳಿಗೆ ದುಡ್ಡು ಕೂಡ ಬರೋದ್ರಿಂದ ಯೂಟ್ಯೂಬ್​ನಲ್ಲಿ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹೆಚ್ಚು ಹೆಚ್ಚು ಚಾನಲ್​ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅಂತೆ ಕಂತೆ ಪುರಾಣ ಹೇಳ್ಕೊಂಡು ದುಡ್ಡಿಗಾಗಿಯೇ ಚಾನಲ್ ಮಾಡಿಕೊಳ್ಳುವುದಲ್ಲ.. ಬದಲಾಗಿ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಗುರುತಿಸಿಕೊಳ್ಳಬೇಕು.
ಅಗತ್ಯ ಮಾಹಿತಿಗಳನ್ನು ನೀಡುವ ಇನ್​ಫಾರ್ಮೇಟಿವ್ ಚಾನಲ್​ಗಳು ಬೇಗನೇ ಟಾಪ್​​ ಲೀಸ್ಟ್​ ನಲ್ಲಿ ಬರಲ್ಲ. ಆದರೆ, ನಿಧಾನಕ್ಕಾದರೂ ಗೆದ್ದೇ ಗೆಲ್ಲುತ್ತವೆ.. ಯಾಕಂದ್ರೆ ಮಾಹಿತಿಗಾಗಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುವ ಜಾಗೃತರು ನಮ್ಮಲ್ಲಿದ್ದಾರೆ.
ಈಗ ವಿಜ್ಞಾನದ ಟೀಚರ್ ಒಬ್ರು ಯೂಟ್ಯೂಬ್ ಚಾನಲ್ ಶುರುಮಾಡಿದ್ದಾರೆ. ಅವರ ಹೆಸರು ರಾಮಚಂದ್ರ ಅಂತ. ಅವರು ತಮ್ಮ ಜ್ಞಾನವನ್ನು ಯೂಟ್ಯೂಬ್​ ಮೂಲಕ ಇನ್ನೊಬ್ಬರಿಗೆ ಹಂಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿದಂತೆ ಯೂಟ್ಯೂಬ್​ ಮೂಲಕವೂ ಒಂದಿಷ್ಟು ಮಂದಿಯನ್ನು ಎಜುಕೇಟ್​ ಮಾಡುವ ಕೆಲಸ ಮಾಡುತ್ತಿದ್ದಾರೆ. Neural Pruning ಎನ್ನುವ ಚಾನಲ್​ ಅನ್ನು ರಾಮಚಂದ್ರ ಅವರು ತೆರೆದಿದ್ದಾರೆ. ಈಗಾಗಲೇ ಐದಾರು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ರಾಮಚಂದ್ರರವರು ಯೂಟ್ಯೂಬ್​ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ರಾಮಚಂದ್ರರವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ..ರಾಮಚಂದ್ರ ಮೇಷ್ಟ್ರು ಯೂಟ್ಯೂಬ್​ ಮೇಷ್ಟ್ರು ಆಗಲಿ ಅಂತ ಹಾರೈಸೋಣ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...