ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುತ್ತಿರುವ ಕಾರ್ಯಕ್ರಮಕ್ಕಾಗಿ ನೆಹರೂ ಮೈದಾನದಲ್ಲಿದ್ದ ಮರಗಳನ್ನು‌ ಕಡಿದ ಸಿಬ್ಬಂದಿ !?

admin
By admin
0 Min Read

ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಭಿಯಾನಕ್ಕೆ ಜ.18ರಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ನಗರದ ನೆಹರೂ ಮೈದಾನದಲ್ಲಿದ್ದ ಆರು ಅಶೋಕ ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ.

ಈ ವಿಚಾರ ಜೋಶಿ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಪ್ರಶ್ನಿಸಿದ ಜೋಶಿ, ಯಾವುದೇ ಪಕ್ಷದ ಕಾರ್ಯಕ್ರಮವಿದ್ದರೂ ಮರಗಳನ್ನು ಕಡಿಯಬಾರದು. ಇವುಗಳನ್ನು ಕಡಿಯಲು ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಮರ ಕಡಿಯತ್ತಿದ್ದವರನ್ನು ಕೇಳಿದರು.ತಕ್ಷಣವೇ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಹಿಟ್ನಾಳ್ ಅವರಿಗೆ ದೂರವಾಣಿ ಕರೆ ಮಾಡಿ ಮರಗಳನ್ನು ಕಡಿದವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

Share This Article