ಲಸಿಕೆಯಿಂದ ವೀರ್ಯದ ಶಕ್ತಿ ಕುಂದುತ್ತದೆಯೇ?

Date:

ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳು ಪುರುಷರದ ವೀರ್ಯದ ಸಾಮರ್ಥ್ಯವನ್ನು ಕುಂದಿಸುತ್ತವೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋವಿಡ್ 19 ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದು.
ಈ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಯಾವುದೇ ಪುರುಷತ್ವ ಸಮಸ್ಯೆ ಇಲ್ಲದಿರುವನ್ನು ಖಾತರಿಪಡಿಸಿಕೊಳ್ಳಲು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್ 19 ಲಕ್ಷಣವುಳ್ಳ ಹಾಗೂ 90 ದಿನಗಳ ಒಳಗೆ ಪಾಸಿಟಿವ್ ಫಲಿತಾಂಶ ಬಂದಿದ್ದವರನ್ನು ಅಧ್ಯಯನದಿಂದ ಹೊರಗಿಡಲಾಗಿತ್ತು.


ಪ್ರಯೋಗದಲ್ಲಿ ಪಾಲ್ಗೊಂಡಿದ್ದ ಪುರುಷರು ತಮ್ಮ ಲಸಿಕೆಯ ಮೊದಲ ಡೋಸ್ ಪಡೆಯುವುದಕ್ಕೂ ಮುನ್ನ ಎರಡದಿಂದ ಏಳು ದಿನಗಳವರೆಗಿನ ಇಂದ್ರಿಯ ನಿಗ್ರಹದ ಬಳಿಕ ವೀರ್ಯದ ಮಾದರಿಗಳನ್ನು ನೀಡಿದ್ದರು. ಎರಡನೆಯ ಡೋಸ್ ಲಸಿಕೆ ಪಡೆದ ಬಳಿಕ ಅಂದಾಜು 70 ದಿನಗಳ ನಂತರ ಮತ್ತೊಮ್ಮೆ ಮಾದರಿಗಳನ್ನು ನೀಡಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ತರಬೇತಿ ಹೊಂದಿರುವ ಆಂಡ್ರೊಲಜಿಸ್ಟ್‌ಗಳು, ವೀರ್ಯದ ಪ್ರಮಾಣ, ವೀರ್ಯದ ಸಾಂದ್ರತೆ, ಚಲನಶೀಲತೆ ಮತ್ತು ಒಟ್ಟು ಚಲನಶೀಲ ಸಂಖ್ಯೆ (ಟಿಎಂಎಸ್‌ಸಿ) ಸೇರಿದಂತೆ ವಿವಿಧ ವಿಶ್ಲೇಷಣೆಗಳನ್ನು ನಡೆಸಿದ್ದರು.
ಅಧ್ಯಯನದ ಆರಂಭದಲ್ಲಿನ ವೀರ್ಯಾಣು ಸಾಂದ್ರತೆ ಹಾಗೂ ಒಟ್ಟಾರೆ ಚಲನಶೀಲ ವೀರ್ಯಾಣು ಸಂಖ್ಯೆಯಗಳು ಕ್ರಮವಾಗಿ 26 ಮಿಲಿಯನ್/ಮಿಲಿಲೀಟರ್ ಹಾಗೂ 36 ಮಿಲಿಯನ್ ಇತ್ತು. ಎರಡು ಲಸಿಕೆಗಳನ್ನು ಪಡೆದ ಬಳಿಕ ನಡೆದ ವಿಶ್ಲೇಷಣೆಯಲ್ಲಿ ವೀರ್ಯಾಣು ಸಾಂದ್ರತೆ ಹಾಗೂ ಒಟ್ಟಾರೆ ಚಲನಶೀಲ ವೀರ್ಯಾಣು ಸಂಖ್ಯೆಯಗಳು ಕ್ರಮವಾಗಿ 30 ಮಿಲಿಯನ್/ಮಿಲಿಲೀಟರ್ ಹಾಗೂ 44 ಮಿಲಿಯನ್ ಇರುವುದು ಪತ್ತೆಯಾಗಿದೆ.
ವೀರ್ಯಾಣು ಪ್ರಮಾಣ ಹಾಗೂ ವೀರ್ಯಾಣು ಚಲನಶೀಲತೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಈ ಲಸಿಕೆಗಳು ಎಂಆರ್‌ಎನ್‌ಎ ಹೊಂದಿದ್ದು, ಇವುಗಳಲ್ಲಿ ಜೀವಂತ ವೈರಸ್ ಇರುವುದಿಲ್ಲ. ಹೀಗಾಗಿ ಲಸಿಕೆಯು ವೀರ್ಯಾಣು ಮಾನದಂಡಗಳಿಗೆ ಹಾನಿ ಮಾಡುವ ಸಂಭವ ಕಡಿಮೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...