- ವಿಶ್ವಾಸಮತ ಯಾಚನೆ ಪ್ರಕ್ರಿಯೆ
- ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುತ್ತಾರೆ.
- ಈ ಸದನವು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ’
ಈ ಮಾತಿನ ಮೂಲಕ ವಿಶ್ವಾಸಮತ ಪ್ರಸ್ತಾವನೆ ಮಂಡಿಸಲಿರುವ ಸಿಎಂ ಕುಮಾರಸ್ವಾಮಿ - ಪ್ರಸ್ತಾವನೆ ಮೇಲೆ ಚರ್ಚೆ ನಡೆಯಲಿ ಎಂದು ಸದಸ್ಯರು ಹೇಳಿದರೆ ಸ್ಪೀಕರ್ ಅವಕಾಶ ನೀಡುತ್ತಾರೆ ಚರ್ಚೆ ಇಲ್ಲದೆ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕಿ ಎಂದರೆ ಸ್ಪೀಕರ್ ಅದಕ್ಕೂ ಅವಕಾಶ ನೀಡುತ್ತಾರೆ
- ಕಲಾಪದಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ.
- ಶಾಸಕರು ಪರ ಮತ್ತು ವಿರೋಧವಾಗಿ ಧ್ವನಿಮತ ಹಾಕುವ ಸಾಧ್ಯತೆಯೂ ಇದೆ. ಅಥವಾ ಪರ ಮತ್ತು ವಿರೋಧ ಇರುವವರನ್ನು ಎರಡು ಪ್ರತ್ಯೇಕ ಸಾಲುಗಳಲ್ಲಿ ಕೂರಿಸಿ ಮತಗಳ ಲೆಕ್ಕಹಾಕಬಹುದು.
- ಸದನ ಸಭೆ ಸೇರುತ್ತಿದ್ದಂತೆಯೇ ಸ್ಪೀಕರ್ ಸೂಚನೆ ಮೇರೆಗೆ ಗಂಟೆ ಬಾರಿಸಲಾಗುತ್ತದೆ. ಆ ಬಳಿಕ ಸದನದ ಬಾಗಿಲು ಮುಚ್ಚಲಾಗುತ್ತದೆ. ಗಂಟೆ ಬಾರಿಸಿದ ಬಳಿಕ ಬರುವ ಶಾಸಕರಿಗೆ ಪ್ರವೇಶ ಇರುವುದಿಲ್ಲ.
- ಈ ಸಂಖ್ಯೆಗಳನ್ನು ಕಾರ್ಯದರ್ಶಿ, ಅಧೀನ ಸಿಬ್ಬಂದಿ ಬರೆದುಕೊಳ್ಳುತ್ತಾರೆ
- ಅಂತಿಮವಾಗಿ ಮತಗಳ ಎಣಿಕೆ ಮುಗಿದ ಬಳಿಕ ಸ್ಪೀಕರ್ ತೀರ್ಪು ಪ್ರಕಟಿಸುತ್ತಾರೆ. ಸರಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದರೇ ರಾಜೀನಾಮೆ ನೀಡಬೇಕು
ಒಂದು ವೇಳೆ ವಿಶ್ವಾಸಮತದ ಪರ ಮತ್ತು ವಿರುದ್ಧ ಮತಗಳು ಟೈ ಆದರೆ, ಸ್ಪೀಕರ್ ಮತಚಲಾಯಿಸುತ್ತಾರೆ