ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ತೀವ್ರ ವಿರೋಧ

Date:

ರಾಜ್ಯದಲ್ಲಿ ಮತಾಂತರ ಕಾಯ್ದೆ ಸಂಬಂಧ ಚರ್ಚೆ ಜೋರಾಗಿರುವ ಹೊತ್ತಲ್ಲೇ ಶಾಲೆಯೊಂದಕ್ಕೆ ನುಗ್ಗಿದ ಹಿಂದೂ ಪರ ಸಂಘಟನೆಗಳು ಕ್ರಿಸ್​ಮಸ್ ಆಚರಣೆಗೆ ತಡೆಯೊಡ್ಡಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಈ ಘಟನೆ ವರದಿಯಾಗಿದೆ. ವಿಜಯ ವಿದ್ಯಾ ಸಂಸ್ಥೆ ಹಾಗೂ ನಿರ್ಮಲ ಅನುದಾನಿತ ಶಾಲೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುತ್ತಿಗೆ ಹಾಕಿದ್ದಾರೆ.

ಜೊತೆಗೆ ಕ್ರಿಶ್ಚಿಯನ್‌ ಆಡಳಿತ ಮಂಡಳಿ ನಡೆಸುವ ಶಾಲೆ ಇದಾಗಿದ್ದು, ಕ್ರಿಸ್ಮಸ್‌ ಹಬ್ಬದ ನೆಪದಲ್ಲಿ ಮತಾಂತರ ನಡೀತಾ ಇದೆ ಅಂತ ಆರೋಪಿಸಿವೆ. ಜೊತೆಗೆ ಕ್ರಿಸ್ಮಸ್ ಆಚರಿಸುವ ಹಾಗೆ ಹಿಂದೂ ಹಬ್ಬಗಳನ್ನು ಯಾಕೆ ಆಚರಿಸಲ್ಲ.. ಗಣಪತಿ ಕೂರಿಸಲ್ಲ.. ಕೃಷ್ಣ ವೇಷ ಹಾಕಿಸಲ್ಲ.. ಹೀಗಿರುವಾಗ ಸಂತಾ ಕ್ಲಾಸ್ ವೇಷ ಹಾಕಿಸಿ ಮಕ್ಕಳಿಗೆ ಚಾಕಲೇಟ್ ಕೊಟ್ಟಿದ್ದು ಯಾಕೆ ಅಂತ ಪ್ರಶ್ನಿಸಿದ್ಧಾರೆ. ಈ ವೇಳೆ ವ್ಯಕ್ತಿಯೊಬ್ಬ, ನಿಮ್ಮ ಶಾಲೆಗೆ ಬಂದ ಹುಡುಗನೊಬ್ಬ ಮನೆಗೆ ಬಂದು ಕಪಾಟಿನ ಮೇಲೆ ಏಸು ಫೋಟೋ ಅಂಟಿಸಿದ್ದಾನೆ. ನೀವು ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮ ಕಲಿಸ್ತಿದ್ದೀರಿ ಅಂತ ಬೆದರಿಕೆ ಹಾಕಿದ್ದಾರೆ. ಅಂದಹಾಗೆ ಹೀಗೆ ಅನುದಾನಿತ ಶಾಲೆಗಳಲ್ಲಿ ಹಬ್ಬ ಆಚರಿಸಲು ಸಂವಿಧಾನದಲ್ಲಿ ಅನುಮತಿ ಇದೆ. ಆದ್ರೆ ಇದ್ರಲ್ಲಿ ಮಕ್ಕಳು ಭಾಗಿಯಾಗಲೇಬೇಕು ಅಂತ ಬಲವಂತ ಮಾಡುವಂತಿಲ್ಲ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...