ಶಿವಾಜಿನಗರದ BMTC ನಿಲ್ದಾಣದ ಬೀಮ್ ಪಿಲ್ಲರ್ ನಲ್ಲಿ ಬಿರುಕು.. ಜನರಲ್ಲಿ ಆತಂಕ..!

Date:

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದ ಬಿಎಂಟಿಸಿ ನಿಲ್ದಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿಲ್ದಾಣದ ಬೀಮ್ ಪಿಲ್ಲರ್ ನಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಆತಂಕ ಎದುರಾಗಿದೆ.

ಶಿವಾಜಿನಗರದ ಬಸ್​ ನಿಲ್ದಾಣ ನಗರದ ಹಳೆಯ ಸಾರ್ವಜನಿಕ ಬಸ್​ ನಿಲ್ದಾಣಗಳಲ್ಲೊಂದು. ಇದೀಗ ಈ ಬಸ್ ನಿಲ್ದಾಣದ ಬೀಮ್ ಪಿಲ್ಲರ್​ ಗಳಲ್ಲಿ ಅಪಾಯಕಾರಿ ಎನ್ನುವಂತ ಬಿರುಕು ಕಾಣಿಸಿಕೊಂಡಿದೆ. ಇದರ ಕೆಳಗೆಯೇ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ದಿನ ನಿತ್ಯ ಓಡಾಡುತ್ತಾರೆ. ನೂರಾರು ಬಿಎಂಟಿಸಿ ಬಸ್​ ಗಳು ಬಂದು ನಿಲ್ಲುತ್ತವೆ. ಹೀಗಾಗಿ ಇದು ಭೀತಿ ಹುಟ್ಟಿಸಿದೆ. ಈ ಬಸ್ ನಿಲ್ದಾಣದ ಪ್ಲಾಟ್​ ಫಾರ್ಮ್ 3, 7 ಹಾಗೂ 11ರ ವರೆಗೆ ಉದ್ದವಾಗಿ ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕೆಳಭಾಗದಲ್ಲಿ ಬಸ್​​​ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಮಹಡಿಯ ಬಸ್ ನಿಲ್ದಾಣವಿದು. ಮೇಲಿನ ಎರಡು ಮಹಡಿಗಳು ಪಾರ್ಕಿಂಗ್ ಹಾಗೂ ನಾಲ್ಕನೇ ಮಹಡಿಯಲ್ಲಿ ಜಿಎಸ್​ಟಿ ಆಯುಕ್ತಾಲಯವಿದೆ. ಇಲ್ಲಿಗೂ ಪ್ರತಿನಿತ್ಯ ಜನರು ಓಡಾಡುತ್ತಾರೆ. ಹೀಗಾಗಿ ಈಗ ಕಾಣಿಸಿಕೊಂಡಿರುವ ಬಿರುಕು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ತಿಂಗಳಿನಿಂದ ಇದೇ ಮಾದರಿಯಲ್ಲಿದೆ ಇದು. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಒದಗಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ

ಶಿವಾಜಿನಗರದ ಬಸ್ ನಿಲ್ದಾಣಕ್ಕೆ ಅಂಟಿಕೊಂಡೇ ನಮ್ಮ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಗೊಟ್ಟಿಗೆರೆ ನಾಗವಾರ ಮಾರ್ಗದ ಭೂಗತ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಬಸ್ ನಿಲ್ದಾಣದ ಪಕ್ಕದಲ್ಲೇ ಸುರಂಗ ಮಾರ್ಗ ಹಾಗೂ ಭೂಗತ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಸುರಂಗ ಮಾರ್ಗ ಕೊರೆಯುತ್ತಿರುವುದರಿಂದ ಈ ಬಸ್​ ನಿಲ್ದಾಣದ ಪಿಲ್ಲರ್‌ಗಳಿಗೆ ಧಕ್ಕೆಯಾಗುವ ಆತಂಕವನ್ನೂ ಸಾರ್ವಜನಿಕರು ವ್ಯಕ್ತ ಪಡಿಸುತ್ತಿದ್ದಾರೆ.

ಹೇಳಿ ಕೇಳಿ ಇದು ಮಳೆಗಾಲ ಬೇರೆ. ಬಿರುಗಾಳಿ ಮಳೆಗೆ ಬಾನೆತ್ತರದ ಕಟ್ಟಗಳು ಬೆಂಗಳೂರಲ್ಲಿ ಕ್ಷಣ ಮಾತ್ರದಲ್ಲಿ ನೆಲಸಮವಾಗುತ್ತದೆ. ಇದರ ಜೊತೆಗೆ ನಮ್ಮ ಮೆಟ್ರೋ ಸುರಂಗ ಕಾಮಗಾರಿಯೂ ನಡೆಯುತ್ತಿರುವುದರಿಂದ ಆತಂಕ ಇಮ್ಮಡಿಯಾಗಿಸಿದೆ. ಕಣ್ಣಿಗೆ ರಾಚುವಂತೆ ಇಲ್ಲಿ ಪಿಲ್ಲರ್ ಗಳಲ್ಲಿ ಬಿರುಕು ಮೂಡಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...