ನಿನ್ನೆ ಭೋಜನದ ಬಳಿಕ ವಿಧಾನಸಭೆ ಕಲಾಪ ಪುನರಾರಂಭ ಆಯಿತು ಆಗ ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಮಂಡನೆ ಮಾಡಿದರು ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ಅವಕಾಶ ಕೊಟ್ರು ಆಗ
ಶಾಸಕ ಶರತ್ ಬಚ್ಚೇಗೌಡ ಅವರು ಅಧಿಕಾರ ಅನ್ನುವುದು ಶಾಶ್ವತವಲ್ಲ ಇವತ್ತು ಇಲ್ಲಿ ಕೂತವರು ಅಲ್ಲಿ ಕೂರಬಹುದು ಅಲ್ಲಿ ಕೂತವರು ಇಲ್ಲಿಬರಬಹುದು ಅದಕ್ಕೆ ಅಧಿಕಾರ ಯಾವತ್ತು ಶಾಶ್ವತವಲ್ಲ ಎಂದರು ಹೊಸಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತೆ.
ಶನಿವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಸಚಿವರನ್ನ ಆಹ್ವಾನಿಸುತ್ತಾರೆ,
ಇದೆಲ್ಲವೂ ನಗರಸಭೆಯ ಆಯುಕ್ತರು ಮಾಡ್ತಾರೆ ನಾನು ಸ್ಥಳೀಯ ಶಾಸಕ ಸ್ಥಳೀಯ ಶಾಸಕನಿಗೆ ಆಹ್ವಾನ ಕೊಡಿಸುವಷ್ಟೂ ಸೌಜನ್ಯವಿಲ್ವೇ
ಇದನ್ನ ಪ್ರಶ್ನಿಸಿ ನಮ್ಮ ಬೆಂಬಲಿಗರು ಪ್ರತಿಭಟನೆ ಮಾಡ್ತಾರೆ ಧರಣಿ ಮಾಡಿದವರ ಮೇಲೆ ಲಾಠಿಚಾರ್ಜ್ ಮಾಡ್ತಾರೆ ಲಾಠಿಚಾರ್ಜ್ ನಿಂದ ಹಲವರು ಗಾಯಗೊಂಡಿದ್ದಾರೆ ಸಬ್ ಇನ್ಸ್ ಪೆಕ್ಟರ್ ಬಾಯಿಬಿಟ್ಟರೆ ಬಾರಿಸ್ತೇವೆ ಅಂತಾರೆ ನಮ್ಮವರ ಮೇಲೆ ಧಮ್ಕಿ ಹಾಕ್ತಾರೆ ಶಾಂತಿಯನ್ನ ರಕ್ಷಣೆ ಮಾಡಬೇಕು ಸಾಮಾಜಕ್ಕೆ ಸೇವೆ ಮಾಡಬೇಕು ಎಂದು ಬಂದವರು ಇವತ್ತು ನಮ್ಮನ್ನ ಹೊಡೆದು ಕೋರ್ಟ್ ಗೆ ಕೇಸ್ ಹಾಗ್ತಾರೆ
ಇಲ್ಲಿ ಯಾರು ಮೇಲೂ ಅಲ್ಲ ಕೆಳಗೂ ಅಲ್ಲ ಇಲ್ಲಿ ಸಭ್ಯತೆಯ ಪ್ರಶ್ನೆ ಎದುರಾಗಿದೆ ಸಭ್ಯತೆಯನ್ನ ಯಾರೂ ಮರೆಯಬಾರದು ಇದು ನನ್ನೊಬ್ಬನ ಶಿಷ್ಟಾಚಾರದ ಉಲ್ಲಂಘನೆಯಲ್ಲ ಇದು ಇಡೀ ಸದನದ ಸದಸ್ಯರ ಶಿಷ್ಟಾಚಾರದ ಪ್ರಶ್ನೆ ಎಂದು ಗಡಸು ಧ್ವನಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಆಕ್ರೋಶ ವೆಕ್ತಿಪಡಿಸಿದರು.