ಸಿಸಿಬಿ ಬಂಧನದಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿ ಜಾಮೀನು ಅರ್ಜಿಯನ್ನು 1 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸುಧೀಂದ್ರ ರೆಡ್ಡಿ ನೀಡಿದ ದೂರಿನನ್ವಯ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಬಿ ಪೊಲೀಸರು ಯುವರಾಜ್ ಮನೆ ಮೇಲೆ ದಾಳಿ ಮಾಡಿದ್ದರು.ದಾಳಿ ವೇಳೆ 91 ಕೋಟಿ ಮೊತ್ತದ ಚೆಕ್ ಗಳು, 26 ಲಕ್ಷ ನಗದು ಪತ್ತೆಯಾಗಿತ್ತು ಈ ವಿಚಾರವಾಗಿ ವಿಚಾರಣೆಗೆ ನೋಟಿಸ್ ನೀಡಿದ್ದರು.
ಅದರಂತೆ ಎಸಿಪಿ ನಾಗರಾಜ್ ಮುಂದೆ ಹಾಜರಾದ ನಟಿ ರಾಧಿಕಾ ಕುಮಾರ್ ಸ್ವಾಮಿ ನೆಲ ಮಹಡಿಯಲ್ಲಿ ರುವ ಸಿಸಿಬಿ ಕಚೇರಿಯಲ್ಲಿ ತನಗೆ ನೀಡಿರುವ ನೋಟಿಸ್ ಕಾಫಿ ತೋರಿಸಿ ಎಸಿಪಿ ಮುಂದೆ ಹಾಜರಾಗಿದ್ದಾರೆ ಹಾಗು ಎಸಿಪಿ ವಿಚಾರಣೆ ನಡೆಸಲಿದ್ದು ಹಾಗೂ ಮಹಿಳಾ ಇನ್ಸ್ಪೆಕ್ಟರ್ ಒಬ್ಬರು ಎಸಿಪಿ ಕೊಠಡಿಯಲ್ಲಿ ಇರಲಿದ್ದಾರೆ.
ಸ್ಯಾಂಡಲ್ ವುಡ್ ಸ್ವೀಟಿಯ ವಿಚಾರಣೆ ಆರಂಭ ವಾಗಿದ್ದು
ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಆರಂಭ ಮಾಡಿ
ನೀವು ಪ್ರೆಸ್ ಮೀಟ್ ಮಾಡಿದ ಉದ್ದೇಶ ಏನು,ನಾವು ಕರೆಯುವ ಮಂಚೆಯೇ ಹೇಗೆ ನೀವು ತೀರ್ಮಾನ ಮಾಡ್ಕೊಂಡ್ರಿ ಎಂಬ
ಹೀಗೆ ಆರಂಭಿಕ ಹಂತದ ಪ್ರಶ್ನೆಗಳನ್ನು ಕೇಳಿ ವಿಚಾರಣೆ ನೆಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.