ಸೌರವ್ ಮೊದಲ ಮತ್ತು ಕೊನೆಯ ಮ್ಯಾಚಲ್ಲಿ ಕ್ರೀಸಿನ ಇನ್ನೊಂದು ತುದಿಯಲ್ಲಿ ಸಚಿನ್..!

Date:

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಭಾರತ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ಯಶಸ್ವಿ ನಾಯಕ. ಗಂಗೂಲಿ ಭಾರತ ಕ್ರಿಕೆಟ್ ತಂಡದ ನಾಯಕರಾದ ಮೇಲೆ ಭಾರತೀಯ ಕ್ರಿಕೆಟ್ ಗೆ ಹೊಸ ರೂಪ ನೀಡಿದರು. ಭಾರತ ಕ್ರಿಕೆಟಿಗೆ ಆಟಗಾರನಾಗಿ ಹಾಗೂ ನಾಯಕನಾಗಿ ಸೌರವ್ ಗಂಗೂಲಿ ಕೊಡುಗೆ ಅಪಾರ.

ಇನ್ನು ಈ ಬಂಗಾಳದ ಹುಲಿ ಸೌರವ್ ಗಂಗೂಲಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟಿನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದು.‌ ಭಾರತ ಕ್ರಿಕೆಟ್ ಯಶಸ್ಸಿನಲ್ಲಿ ಈ ಜೋಡಿಯ ಪಾತ್ರ ಮಹತ್ವದ್ದು. ಅದೆಷ್ಟೋ ಪಂದ್ಯಗಳಲ್ಲಿ ಈ ಜೋಡಿ ವಿಶ್ವ ಶ್ರೇಷ್ಠ ತಂಡಗಳ, ವಿಶ್ವ ಶ್ರೇಷ್ಠ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ.

ವಿಶೇಷವೆಂದರೆ ಸೌರವ್ ಗಂಗೂಲಿ ಮೊದಲ ಅಂತರಾಷ್ಟ್ರೀಯ ಪಂದ್ಯ ಹಾಗೂ ಕೊನೆಯ ಪಂದ್ಯ ಎರಡರಲ್ಲೂ ಕ್ರೀಸ್ ನ ಇನ್ನೊಂದು ತುದಿಯಲ್ಲಿ ಸಚಿನ್ ತೆಂಡೂಲ್ಕರ್ ಇದ್ದರು.

ದಾದ ಚೊಚ್ಚಲ ಮ್ಯಾಚ್ : ಬಂಗಾಳದ ಹುಲಿ ಸೌರವ್ ಗಂಗೂಲಿ ಮೊದಲ ಪಂದ್ಯ ಆಡಿದ್ದು 1992 ಜನವರಿ 11 ರಂದು.‌ ಬ್ರಿಸ್ಬೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಂಟ್ರಿ ಕೊಟ್ಟರು. ಆ ಪಂದ್ಯದಲ್ಲಿ ಸಚಿನ್ 4 ನೇ ಕ್ರಮಾಂಕದಲ್ಲಿ ಹಾಗೂ ಗಂಗೂಲಿ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದಿದ್ದರು. ಗಂಗೂಲಿ 13 ಬಾಲ್ ಗಳನ್ನು ಎದುರಿಸಿ ಕೇವಲ 3 ರನ್ ಮಾತ್ರ ಗಳಿಸಿ ಔಟಾಗಿದ್ದರು. ಗಂಗೂಲಿ ಕ್ರೀಸಿಗಿಳಿಯುವಾಗ ಸಚಿನ್ ನಾನ್ ಸ್ಟ್ರೈಕರ್ ಆಗಿದ್ದರು. ಅವರು‌ 127 ಬಾಲ್ ಗಳಲ್ಲಿ 77 ರನ್ ಬಾರಿಸಿದ್ದರು. ಭಾರತ 191 ರನ್ ಗಳಿಗೆ ಆಲೌಟ್ ಆಗಿತ್ತು. ವಿಂಡೀಸ್ 6 ವಿಕೆಟ್ ಗಳ ಗೆಲುವು ದಾಖಲಿಸಿತ್ತು.

ಗಂಗೂಲಿ ವಿದಾಯದ ಪಂದ್ಯ : 2008 ರಲ್ಲಿ ಸೌರವ್ ಗಂಗೂಲಿ ತಮ್ಮ ವರ್ಣರಂಜಿತ ಕ್ರಿಕೆಟಿಗೆ ಗುಡ್ ಬೈ ಹೇಳಿದರು.‌ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯ ಗಂಗೂಲಿ ವಿದಾಯದ ಪಂದ್ಯ.‌ ಆ ಪಂದ್ಯದ ಮೊದಲ ಇನ್ನಿಂಗ್ಸನಲ್ಲಿ 85ರನ್ ಬಾರಿಸಿದ್ದ ಅವರು, ಎರಡನೇ ಇನ್ನಿಂಗ್ಸಲ್ಲಿ ಒಂದೇ ಬಾಲ್ ನಲ್ಲಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿದ್ರು.‌ ವಿಶೇಷ ಅಂದ್ರೆ ಗಂಗೂಲಿಯ ಈ ಕೊನೆಯ ಪಂದ್ಯದಲ್ಲಿಯೂ ಸಚಿನ್ ಕ್ರೀಸ್ ನ ಇನ್ನೊಂದು ತುದಿಯಲ್ಲಿದ್ದರು. ಮೊದಲ ಇನ್ನಿಂಗ್ಸಲ್ಲಿ ಶತಕ (109) ಎರಡನೇ ಇನ್ನಿಂಗ್ಸಲ್ಲಿ‌ 12 ರನ್ ಮಾಡಿದ್ದರು. ಭಾರತ ತಂಡ 172 ರನ್ ಗಳ ಅಂತರದ ಜಯ ದಾಖಲಿಸಿ, ಗಂಗೂಲಿಗೆ ಗೆಲುವಿನ ಉಡುಗೊರೆ ನೀಡಿತ್ತು.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...