ಕೆಲವೇ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಅಕ್ರಂ ಪಾಷಾ ಅವರನ್ನು ಚುನಾವಣಾ ಆಯೋಗದ ಸೂಚನೆ ಮೇರೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ನೂತನ ಜಿಲ್ಲಾಧಿಕಾರಿ ಯಾಗಿ ಉಡುಪಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಹಾಗೂ ಬೆಂಗಳೂರಿನಲ್ಲಿ ರಾಜ್ಯ ಪ್ರವಾಸೊಧ್ಯಮ ಇಲಾಖೆಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ಹಿಸುತ್ತಿದ್ದ ಪ್ರಿಯಾಂಕಾ ಮೇರಿ ಫ್ರಾಂಸೀಸ್ ಅವರನ್ನು ನೇಮಕ ಮಾಡಿ ಚುನಾವಣಾ ಆಯುಕ್ತರ ಸರ್ಕಾರ ಆದೇಶ ಹೊರಡಿಸಿ ನೇಮಕ ಮಾಡಿತ್ತು,
ಆದರೆ ಈಗ ಚುನಾವಣೆ ಸರಿಯಾಗಿ ನಡೆದಿಲ್ಲಾ ಹೊಸ ಜಿಲ್ಲಾಧಿಕಾರಿ ಬಿಜೆಪಿ ಏಜೆಂಟ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಅಲ್ಲದೆ ಚುನಾವಣೆ ವೇtಳೆ ನಮ್ಮ ಪಕ್ಷ ದ ಏಜೆಂಟ್ ಹಾಗೂ ಅಭ್ಯರ್ಥಿಗೆ ಇಲ್ಲಸಲ್ಲದ ತೊಂದರೆ ನೀಡಿದ್ದಾರೆ. ಎಂದು ದೂರನ್ನು ಸಹ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನೀಡಿದ್ದಾರೆ.
ಇನ್ನೂ ಇದೇ ಚುನಾವಣಾಧಿಕಾರಿ ಅಧಿಕಾರದಲ್ಲಿ ಮುಂದುವರೆದರೆ ಮೇ.23 ರಂದು ನಡೆಯುವ ಮತದಾನ ಏಣಿಕೆ ಪಾರದರ್ಶಕ ವಾಗಿ ನಡೆಯುವುದು ಅನುಮಾನವಿದೆ ಕೂಡಲೇ ಪ್ರಿಯಾಂಕಾ ಅವರನ್ನು ಬದಲಿಸಿ ಎಂದು ಒತ್ತಾಯಿಸಿದ್ದಾರೆ.