No menu items!
34.6 C
Munich
Saturday, August 15, 2026

ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್: ಜೈಲಲ್ಲಿ ರೌಡಿಗಳ ಹೊಡೆದಾಟ!?

Must read

ಪರಪ್ಪನ ಅಗ್ರಹಾರ ಜೈಲಲ್ಲಿ ಫೈಟಿಂಗ್ ಶುರುವಾಗಿದೆ. ರೌಡಿ ಲಕ್ಷ್ಮಣ್ ಶಿಷ್ಯಂದಿರಿಂದ ಜೈಲಲ್ಲಿ ಕಿರಿಕ್ ಮಾಡಲಾಗುತ್ತಿದೆ. ಲಕ್ಷಣ್ ಕೊಲೆ ಆರೋಪಿಗಳ ಬಳಿ ಕಿರಿಕ್ ತೆಗೆಯುತ್ತಿದ್ದಾರೆ. ಹೇಮಂತ್ ಅಲಿಯಾಸ್ ಹೇಮಿಗೆ ಜೈಲಲ್ಲೇ ಗೂಸಾ ನೀಡಲಾಗಿದೆ. ಜೈಲಲ್ಲಿ ಗಲಾಟೆ ಶುರುವಾದದ್ದೇ ತಡ, ಗಲಾಟೆ ಬಳಿಕ ಎಚ್ಚೆತ್ತ ಜೈಲು ಅಧಿಕಾರಿಗಳು ಪ್ರಮುಖ 5 ಆರೋಪಿಗಳನ್ನು ಬೇರೆ ಜೈಲಿಗೆ ಶಿಪ್ಟ್ ಮಾಡಿದ್ದಾರೆ.

ಭದ್ರತಾ ಕೊರತೆ ಹಿನ್ನಲೆ ಆರೋಪಿಗಳನ್ನು ಸ್ಥಳಾಂತರ ಮಾಡಿದ್ದಾರೆ. ಆರೋಪಿ ಹೇಮಂತ್ ಅಲಿಯಾಸ್ ಹೇಮಿಯನ್ನು ವಿಜಯಪುರ, ವರ್ಷಿಣಿ ಮತ್ತು ರೂಪೇಶ್ ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.


ಕ್ಯಾಟ್ ರಾಜ ಹಿಂಡಲಗಾ, ದೇವರಾಜ್ ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಲಾಗಿದೆ.ಉಳಿದ ನಾಲ್ವರು ಆರೋಪಿಗಳಿಗೆ ಜೈಲಿನಲ್ಲಿ ಟೈಟ್ ಸೆಕ್ಯೂರಿಟಿ ನೀಡಲಾಗಿದೆ. ಪ್ರತ್ಯೇಕ ಸೆಲ್ ನಲ್ಲಿ ನಾಲ್ವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ರೌಡಿ ಲಕ್ಷ್ಮಣ್ ಕೊಲೆಗೆ ಸೇಡು ತೀರಿಸಿಕೊಳ್ಳಲು ಜೈಲಲ್ಲೇ ಪ್ಲಾನ್ ನಡೆಯುತ್ತಿರುವಂತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article