ಮಸೀದಿ ಮಂದಿರದ ಬಾಗಿಲಲಿ

Date:

ಮಸೀದಿ ಮಂದಿರದ ಬಾಗಿಲಲಿ

ಎತ್ತ ನೋಡಲಿ ಜಗದ ಕತ್ತಲು
ಸುತ್ತಲೂ ಸುತ್ತುತಿಹುದು
ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು
ಮೀಸೆ ಇಲ್ಲದ ಗಡ್ಡವು
ಹೊಸ ಪಕ್ಷದ ಪೋಷಾಕು ತೊಟ್ಟಿಹುದು
ಏನಿದೇನಿದು.. ರಣರಂಗವೋ – ಸಂಗದಿ ಸಂಧಿಸಿಹ
ಗುಲಾಮಗಿರಿಯ ಹೋರಾಟವೋ ನಾನರಿಯೆ.
ಚೂರಿ ಇರಿದವ ರಂಗನಾದರೆ
ತುಪಾಕಿ ಹಿಡಿದವ ರಹೀಮನೆಂಬ
ಪಟ್ಟ ಕಟ್ಟಿಹರು ಓ ಕಾವ್ಯದತ್ತ
ಎತ್ತ ಸಾಗುತಿದೆ ಈ ಜಗದ ಚಿತ್ತ
ಶ್ರೀಮಂತನ ಮನೆಯ ಗುದ್ದಲಿ ಪೂಜೆಗೆ
ರಾಮ-ರಹೀಮರ ಬಲಿ ಕೊಡಬೇಕೇ..?
ಹೋರಾಡುವ ಸಮಚಿತ್ತದಿ
ಮಸೀದಿಯ-ದೇಗುಲದ ರಕ್ತ ಒಂದೇ
ಸಂಯುತ್ತವಾಗಿ ಸಮಸ್ಯೆಯ ಶಿಖರವ
ಪುಡಿಗೈಯುವ ವಿಶ್ವಮಾನವತೆಯ
ಮಂತ್ರವ ಬಿಗಿದಪ್ಪುವ.⭐
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...