ಬದು”ಕಾಟ”ದ ನೋಟ

Date:

ಬದುಕೆಂಬ ಹೆಸರೇ ಕೆಸರು
ಉಸಿರಾಟದ ಬಸಿರಲ್ಲಿ
ಜಗದ ಜಾತ್ರೆಗೆ ಜಾರಿ
ಜೀವನದ ಜಂಜಾಟದ
ಜೋಳಿಗೆಯ ಹಿಡಿದು
ನಿಲ್ಲದೋಟವ ಬಾಚಿ ತಬ್ಬಿ
ಯೋಚನೆಯಲೇ ಯೋಜನೆಯ ರೂಪಿಸಿ
ವಿವೇಚನೆಯ ತಡೆಗೋಡೆಗೆ
ಕಾಮ-ಕ್ರೋಧಗಳ ತೂಗಿಹಾಕಿ
ಉರುಳು ಕೊರಳ ಸುತ್ತಿದಾಗಲೂ
ನಗುವ ಅಲೆಯು ಕನ್ನಡಿಯಲೇ ತೇಲಿ
ತನ್ನದೆಯ ಒಂಟಿ ನೋವ
ಸೋಸಿ ತೆಗೆಯುವ ಹೊತ್ತಿಗೆ
ಈ ಜಗದ ಗುತ್ತಿಗೆ ಮುಗಿಯುವುದು
ಹೊಸಚಿಗುರು ಅರಳುವುದು
ಮತ್ತೆ ಮತ್ತೆ ಬದುಕಿನ ಆಟದಲೇ
ಮುಳುಗುವುದು ಕಾವ್ಯದತ್ತ.?

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...