ಯುವಕ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಜೈಲೇ ಗತಿ ಎಂಬ ಯಾತನೆ ನಲಪಾಡನದ್ದು.
ನಲಪಾಡ್ ಹಲ್ಲೆ ನಡೆಸಿರೋದು ಸಿಸಿಟಿವಿ ಫೂಟೇಜ್ ನಿಂದ ಸ್ಪಷ್ಟವಾಗಿದೆ. ಜೊತೆಗೆ ಡಿಸ್ಕಾರ್ಜ್ ಸಮ್ಮರಿ ಆರೋಪಿಯ ತಂದೆಗೆ ಸಿಕ್ಕಿರೋದು ಅನುಮಾನ ಮೂಡುತ್ತೆ ಅಂತ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ನಲಪಾಡ್ ನ ಅರ್ಜಿ ತಿರಸ್ಕರಿಸಿದೆ.
ಎಫ್ ಐ ಆರ್ ಹಾಕುವಲ್ಲಿ ವಿಳಂಬ , ಸಿಸಿಟಿವಿಯಲ್ಲಿ ನಲಪಾಡ್ ಹಲ್ಲೆ ನಡೆಸಿರೋದು ಸ್ಪಷ್ಟವಾಗಿದೆ, ವೈದ್ಯಕೀಯ ವರದಿ ಹ್ಯಾರಿಸ್ ಕೈಗೆ ಸೇರಿರೋದು ಈ ಕಾರಣಗಳಿಗಳಿಂದ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ.