ವಿಪ್ರೋ ಕಂಪನಿ ಮಾಡಿದ ಅವಮಾನದಿಂದ ಹುಟ್ಟಿಕೊಂಡಿದ್ದು ಇನ್ಫೋಸಿಸ್..!

Date:

ಜಗತ್ತಿನ ಪ್ರಭಾವಿ ಉದ್ಯಮಿಗಳಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕೂಡ ಒಬ್ಬರು ಇಂತಹ ಇನ್ಫೊಸಿಸ್ ನಾರಾಯಣ ಮೂರ್ತಿಯವರಿಗೆ ಅಂದಿನ ಕಾಲದಲ್ಲಿ ಬಹುದೊಡ್ಡ ಸಂಸ್ಥೆ ವಿಪ್ರೋ ಕಂಪನಿಯ ಸಂಸ್ಥಾಪಕ ಪ್ರೇಮ್ ಜೀ ಅವರು ರಿಜೆಕ್ಟ್ ಮಾಡಿದ್ದರಂತೆ. ವಿಪ್ರೋ ಕಂಪನಿಯಿಂದ ರಿಜೆಕ್ಟ್ ಆದ್ಮೇಲೆ ನನಗೆ ಇನ್ಫೋಸಿಸ್ ಮಾಡಬೇಕು ಎಂಬ ಅಲೋಚನೆ ಬಂತು ಎಂದು ನಾರಾಯಣ ಮೂರ್ತಿ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ನಾರಾಯಣ ಮೂರ್ತಿ ಅವರಿಗೆ ಪ್ರಸನ್ನ ಎನ್ನುವ ಅವರ ಸ್ನೇಹಿತ ಒಂದು ಸಲಹೆ ಕೊಟ್ಟಿದ್ದರಂತೆ. ವಿಪ್ರೋ ಕಂಪನಿಯಲ್ಲಿ ಎಚ್.ಆರ್ ಮ್ಯಾನೇಜರ್ ಆಗಿದ್ದ ಅವರು ‘ಪ್ರೇಮ್ ಜೀ ಅವರನ್ನ ನೀನು ಭೇಟಿ ಮಾಡಬಹುದು ಯಾಕೆಂದರೆ ಸಾಫ್ಟವೇರ್ ರಫ್ತು ಮಾಡುವ ಯೋಜನೆಗೆ ವಿಪ್ರೋ ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರಂತೆ ಹಾಗಾಗಿ ನಾರಾಯಣ ಮೂರ್ತಿ ಅವರು ಕೂಡ ಪ್ರೇಮ್ ಜೀ ಅವರನ್ನ ಭೇಟಿ ಮಾಡಲು ನಿರ್ಧರಿಸಿದರಂತೆ.

ಸ್ನೇಹಿತ ನೀಡಿದ ಸಲಹೆಯಿಂದ, ಪ್ರೇಮ್ ಜೀ ಅವರನ್ನ ಭೇಟಿ ಮಾಡಲು ನಿರ್ಧರಿಸಿ ಕ್ಲಬ್ ವೊಂದರಲ್ಲಿ ಅವರನ್ನು ನಾರಾಯಣಮೂರ್ತಿ ಭೇಟಿಯಾದರು ಬಳಿಕ ಅಂದು ಪ್ರೇಮ್ ಜೀ ಅವರು ಮಾತುಕಥೆಯ ಬಳಿಕ ನಾರಾಯಣ ಮೂರ್ತಿ ಅವರನ್ನ ತಿರಸ್ಕರಿಸಿ ಹೊರಟು ಹೋಗಿದ್ದರಂತೆ ಆದರೆ ಅದು ಯಾಕೆ ಎನ್ನುವ ಕಾರಣವನ್ನು ನಾರಾಯಣ ಮೂರ್ತಿ ಹೇಳಿಲ್ಲ.

ಆದರೆ ಅಂದು ವಿಪ್ರೋ ಕಂಪನಿಯ ಸಂಸ್ಥಾಪಕ ಪ್ರೇಮ್ ಜೀ ಅವರು ತಿರಸ್ಕಾರ ಮಾಡಿದ್ದು ಒಳ್ಳೆದಾಯಿತು. ಇಲ್ಲವಾಗಿದ್ದರೆ ಇನ್ಫೋಸಿಸ್ ಅಂತಹ ದೊಡ್ಡ ಕಂಪನಿ ಹುಟ್ಟುತ್ತಿರಲಿಲ್ಲ ಎಂದು ಹೇಳಿದ್ದಾರೆ.

 

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...