No menu items!
7.8 C
Munich
Thursday, April 30, 2026

ಅಂತ್ಯದಲ್ಲಿರುವ ದೋಸ್ತಿ ಸರ್ಕಾರ ! ತಲೆಕೆಡಿಸಿಕೊಳ್ಳದ ರೇವಣ್ಣ ಮಾಡಿದ್ದೇನು ಗೊತ್ತಾ.?

Must read

ಶಾಸಕರ ರಾಜೀನಾಮೆಯಿಂದಾಗಿ ದೋಸ್ತಿ ಸರ್ಕಾರ ಸಂಕಷ್ಟದಲ್ಲಿದ್ದು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅಲ್ಲದೇ, ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಎಂಜಿನಿಯರ್ ಗಳ ಬಡ್ತಿ ಮತ್ತು ವರ್ಗಾವಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ 800 ಕ್ಕೂ ಹೆಚ್ಚು ಎಂಜಿನಿಯರ್ ಗಳ ಬಡ್ತಿಗೆ ಇಲಾಖಾ ಪದೋನ್ನತಿ ಸಮಿತಿ ಸಭೆ ನಡೆಸಲಾಗಿದೆ. ಇದರೊಂದಿಗೆ 175 ಇಂಜಿನಿಯರ್ ಗಳ ವರ್ಗಾವಣೆಯನ್ನು ಮಾಡಿಸುವುದರಲ್ಲಿ ರೇವಣ್ಣ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ದೋಸ್ತಿ ಸರ್ಕಾರ ಸಂಕಷ್ಟ ಸ್ಥಿತಿಗೆ ತಲುಪುತ್ತಿದ್ದಂತೆ ಸಚಿವ ರೇವಣ್ಣ ಒತ್ತಡ ತಂದು ವರ್ಗಾವಣೆ ಮತ್ತು ಬಡ್ತಿ ಮಾಡಿಸಿದ್ದಾರೆ.ಸಚಿವರ ಸಾಮೂಹಿಕ ರಾಜೀನಾಮೆ ಬಳಿಕವೂ ಹೆಚ್.ಡಿ. ರೇವಣ್ಣ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article