ಅಗಲಿದ‌ ಬುಲೆಟ್ ಪ್ರಕಾಶ್ ಯಾವೆಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ?

Date:

ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ , ನಮ್ಮನ್ನೆಲ್ಲಾ ನಗೆಕಡಲಲ್ಲಿ ತೇಲಿಸಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ನೆನಪು ಮಾತ್ರ . ಅವರು ನಿನ್ನೆ ನಮ್ಮನ್ನೆಲ್ಲಾ ಅಗಲಿದ್ದಾರೆ . ಮರೆಯಾಗುವ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದು, ಅವುಗಳು ಬಿಡುಗಡೆಯಾಗ ಬೇಕಿದೆ .

ಬುಲೆಟ್ ಪ್ರಕಾಶ್ ಕೊನೆಯದಾಗಿ ನಟಿಸಿರುವ ಸಿನಿಮಾ, ತೆರೆಕಾಣಲಿರುವ ಸಿನಿಮಾಗಳು, ನಟಿಸಬೇಕಿದ್ದ ಸಿನಿಮಾಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಪಟ್ಟಿ .

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಶಾಂತಿ – ಕ್ರಾಂತಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಬುಲೆಟ್ ಪ್ರಕಾಶ್ ಕನ್ನಡ ಹಾಸ್ಯ ಮತ್ತು ಸಿನಿ ಜಗತ್ತಿಗೆ ನೀಡಿದ ಕೊಡುಗೆ ಅಪಾರ .

ದೈತ್ಯ ದೇಹ, ವಿಶಿಷ್ಟ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ನಗೆ‌ಕಡಲಿನಲ್ಲಿ ತೇಲಿಸಿದ್ದರು . ಐತಲಕಡಿ ಎಂಬ ಒಂದು ಸಿನಿಮಾದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದರು . ಚಂದನವನದ ಬಹುಬೇಡಿಕೆಯ ಹಾಸ್ಯ ನಟನಾಗಿದ್ದರು .

ರವಿಚಂದ್ರನ್ ಸಿನಿಮಾ ಮೂಲಕವೇ ಸಿನಿಯಾನ ಆರಂಭಿಸಿದ್ದ ಬುಲೆಟ್ ಪ್ರಕಾಶ್, ರವಿಚಂದ್ರನ್ ಅವರೊಡನೆ‌‌ 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದ ಬುಲೆಟ್ ಪ್ರಕಾಶ್ , ಅವರೊಡನೆ‌ ಧ್ರುವ, ಭಗವಾನ್, ಶೌರ್ಯ, ಕಲಾಸಿಪಾಳ್ಯ, ದತ್ತ, ಐರಾವತ ಸಿನಿಮಾಗಳಲ್ಲಿ ಅಭಿನಯಿಸಿದ್ದರು .

ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು . ನೀರ್ ದೋಸೆ ಸಿನಿಮಾ ಮೂಲಕ ಕಮ್ ಬ್ಯಾಕ್ ಆಗಿದ್ದರು .

ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಸಿನಿಮಾ ಲಾಕ್ ಡೌನ್ ಮುಗಿದ ಬಳಿಕ ತೆರೆ ಕಾಣಲಿದೆ .

ನೀರ್ ದೋಸೆ ಡೈರೆಕ್ಟರ್ ವಿಜಯ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಸಿನಿಮಾದಲ್ಲಿ ನಟಿಸುತ್ತಿದ್ದರು .‌ 45 ದಿನಗಳ ಕಾಲ್ ಶೀಟ್ ಕೂಡ ನೀಡಿದ್ದರು ..! ಆದರೆ ..?

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ – 2 ನಲ್ಲಿ ಕೊನೆಯ ಬಾರಿ ಕ್ಯಾಮಾರಾ ಮುಂದೆ ಕಾಣಿಸಿಕೊಂಡಿದ್ದು , ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಹಾಸ್ಯ ಚಟಾಕಿ ಹಾರಿಸಿದ್ದಾರೆ‌ . ಸಿನಿಮಾ ರಿಲೀಸ್ ಆಗಬೇಕಿದೆ .

ಓಂ ಪ್ರಕಾಶ್ ರಾವ್ ಆ್ಯಕ್ಷನ್ ಕಟ್ ಹೇಳಲಿರುವ ಬೆಳಗಾಂ, ಗಲ್ಲ ಸಾಧುಕೋಕಿಲ ಅವರ ಸ್ವಾಮೀಜಿ, ರಿಷಿ ನಿರ್ದೇಶಿಸಲಿರುವ ಇಟ್ರಲ್ಲಪ್ಪೋ ಬತ್ತಿ , ಜಯಸಿಂಹ ರೆಡ್ಡಿ ನಿರ್ದೇಶನದ ಲವ್ ಕಾಲೇಜ್ ಎಂಬ ಚಿತ್ರಗಳು ಸೇರಿದಂತೆ ಒಂದಿಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು . ಆದರೆ ವಿಧಿಯಾಟವೇ ಬೇರೆಯಾಗಿತ್ತು . ಬುಲೆಟ್ ಬಿಟ್ಟು ಹೋಗಿದ್ದಾರೆ . ಅವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ .

ಬುಲೆಟ್ ಪ್ರಕಾಶ್ ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು .‌ ಇನ್ನೂ ಒಂದಿಷ್ಟು ಸಿನಿಮಿಮಾಗಳಲ್ಲಿ ನಟಿಸಿ , ಇನ್ನೂ ಒಂದಿಷ್ಟು ಕಾಲ ನಮ್ಮ ನಿಮ್ಮ ನಡುವೆ ಇರಬೇಕಿತ್ತು . ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳ ಮೂಲಕ ರಂಜಿಸಿದ್ದ ಅವರು ನಿರ್ಮಾಪಕರಾಗುವ ಕನಸು ಹೊಂದಿದ್ದರು . ನೆಚ್ಚಿನ ಗೆಳೆಯ ದರ್ಶನ್ ಗಾಗಿ ಸಿನಿಮಾ ಮಾಡಬೇಕೆಂಬ ಆಸೆ ಇತ್ತು . ತಾನು ನಿರ್ಮಾಪಕನಾಗಿ ಮಗನನ್ನು ಹಿರೋ ಮಾಡಬೇಕೆಂದಿದ್ದರು ‌.  ಆ ಎಲ್ಲ ಕನಸು ನನಸಾಗುವ ಮುನ್ನ ಅಗಲಿದ್ದಾರೆ .

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...