ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಇಂಟ್ರೆಸ್ಟಿಂಗ್ ಸ್ಟೋರಿ

Date:

 

ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಇಂಟ್ರೆಸ್ಟಿಂಗ್ ಸ್ಟೋರಿ

ಆಕೆ ಹೆಣ್ಣಾದರೂ ಅವಳ ಕನಸು ಮಾತ್ರ ಮಹತ್ತರವಾದದ್ದಾಗಿತ್ತು. ತನ್ನ ಅಸಹಾಯಕತೆಯನ್ನು ನೆನೆದು  ಆಗಾಗ ದುಃಖಕ್ಕೆ  ಒಳಗಾಗುತ್ತಿದ್ದಳು. ಆದರೂ ತನ್ನ ಗುರಿಯನ್ನು ಮರೆತಿರಲಿಲ್ಲ. ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಅನ್ನುವುದೊಂದೇ ಅವಳ ಛಲ. ಆ ಛಲದೊಂದಿಗೆ ಒಂದು ನಿರ್ದಿಷ್ಟ ಗುರಿಯ ಕನಸು ಅವಳದ್ದು. ಈಗ ಅವಳನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕೊಂಡಾಡುತ್ತಿದೆ.

ಹೌದು, ಆ ಛಲಗಾರ್ತಿ ಹೆಸರು ಅರುಣಿಮಾ ಸಿನ್ಹಾ.. ಇವರು ವಿಶ್ವದ ಅತಿದೊಡ್ಡ ಹಿಮಪರ್ವತ, ಮೌಂಟ್ ಎವೆರೆಸ್ಟ್  ಏರಿದ ಪ್ರಪಂಚದ ಹಾಗೂ ಭಾರತದ ಮೊದಲ ಮಹಿಳೆ. ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಲೈಫ್ ಸ್ಟೋರಿ ಇಲ್ಲಿದೆ.

ಅರುಣಿಮಾ ಸಿನ್ಹಾ, ಉತ್ತರ ಪ್ರದೇಶ, ಲಕ್ನೋ ಸಮೀಪದ ಅಂಬೇಡ್ಕರ್ ನಗರ ಎನ್ನುವ ಸಣ್ಣ ಪಟ್ಟಣದಲ್ಲಿ 1988 ಜುಲೈ 20ರಂದು ಜನಿಸಿದರು.  ಇವರು 3ನೇ ವಯಸ್ಸಿನಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ತಂದೆ ಭಾರತೀಯ ಸೇನೆಯಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿ.

ಚಿಕ್ಕ ವಯಸ್ಸಿನಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲ್ನಲ್ಲಿ ತನ್ನದೇ ಆದ ಪ್ರತಿಭೆಯನ್ನು ಹೊಂದಿದ್ದರು. ಅವರ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರ್ತಿಯಾಗಿ ಮಿಂಚಿದ್ರು. ತನ್ನ ಕ್ರೀಡಾ ಆಸಕ್ತಿಯನ್ನು ಸಿಎಸ್ಐಎಫ್​ನಲ್ಲಿ ಅನ್ವಯಿಸಲು ನಿರ್ಧರಿಸಿದ್ರು.

ಈ ನಡುವೆ ದೆಹಲಿಯಿಂದ ಒಂದು ಕರೆ ಪತ್ರ ಬಂದಿತ್ತು. ಆ ಕರೆ ಪತ್ರ ಮೇಲ್ನೋಟಕ್ಕೆ ಆಕೆಗೊಂದು ಅದೃಷ್ಟವಾಗಿದ್ದುದಾಗಿದ್ದರೂ ಆಕೆಯ ಬದುಕಿನ ತಿರುವು ಮಾತ್ರ ದುಃಖಕರವಾಗಿತ್ತು.

2011 ಏಪ್ರಿಲ್ 11ರಂದು  ಅರುಣಿಮಾ, ಸಿಆರ್ ಎಫ್  ಪೊಲೀಸ್ ಕಾನ್ಸ್ ಟೇಬಲ್ ಕೆಲಸಕ್ಕಾಗಿ ಇಂಟರ್ ವ್ಯೂಗೆ ಲಕ್ನೊದಿಂದ ದೆಹಲಿಗೆ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ರೈನಿನಲ್ಲಿ  ಕಳ್ಳರ ಗುಂಪೊಂದು ಅರುಣಿಮಾ ಅವರಿಗೆ ಚಿನ್ನದ ಸರವನ್ನು ನೀಡೆಂದು ಹೆದರಿಸಿತು. ಅದಕ್ಕೆ ಅವರು ಜಗ್ಗಲಿಲ್ಲ. ಆಮೇಲೆ, ಅರುಣಿಮಾರನ್ನು ಟ್ರೈನಿನಿಂದ ಹೊರಗಡೆ ಎಸೆದರು ಆ ದುಷ್ಕರ್ಮಿಗಳು. ಆಗ ಅವರು ಅಲ್ಲಿಂದ ಎದ್ದು ಪಾರಾಗುವಷ್ಟರಲ್ಲಿ  ಮತ್ತೊಂದು ರೈಲು ಅವರ ಕಾಲಿನ ಮೇಲೆ ಹರಿದು ಹೋಯಿತು..!

ಅದೃಷ್ಟವಶಾತ್ ಅವರ ಜೀವ ಉಳಿದಿತ್ತು . ಅವರು ತನ್ನ ಗುರಿಯನ್ನು ತಲುಪುವ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಎವರೆಸ್ಟ್ ಏರುವುದಕ್ಕಾಗಿ ಏನು ಮಾಡಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿದರು. ಕನಸು ನನಸಾಯಿತು ದೃಢವಾದ ಮನಸ್ಸು ಹಾಗೂ ಗುರಿಯಿಂದಾಗಿ 2014 ಮೇ 21ರಂದು  ಎವರೆಸ್ಟ್ ತುದಿಯನ್ನು ತಲುಪಿದರು. ನೋಡು ನೋಡುತ್ತಿದ್ದಂತೆಯೇ ಅವರು, ವಿಶ್ವದ ಅತ್ಯುನ್ನತ ಶಿಖರವನ್ನು ತಲುಪಿದ ಮೊದಲ ವಿಶೇಷಚೇತನ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು.

ಮೌಂಟ್ ಎವರೆಸ್ಟ್ ಏರಿದ ಮಹಿಳೆ ಎನ್ನುವುದರ ಮೂಲಕ ವಿಶ್ವ ದಾಖಲೆಯನ್ನು ಮಾಡಿದರು. 2015ರ ಜನವರಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಆಗಿನ ರಾಷ್ಟ್ರಪತಿ ಪ್ರಬಬ್ ಮುಖರ್ಜಿ ಅವರಿಂದ ಪಡೆದುಕೊಂಡಿದ್ರು.

ಅರುಣಿಮಾ, ಅವರು ತಮ್ಮ ಆತ್ಮಕಥನ ‘Born Again Moutain’ ಪುಸ್ತಕವನ್ನು  ಪ್ರಧಾನಿ ನರೇಂದ್ರ ಮೋದಿಯ ಅವರಿಂದ ಬಿಡುಗಡೆ ಮಾಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಸಾಧಕಿ ಅರುಣಿಮಾ ಅವರ ಮನಸ್ಸು  ನೋಡಿ, ಸಾಮಾನ್ಯವಾಗಿ ಕೃತಕ ಕಾಲಿನ ಜೋಡಣೆಯಾದ ಬಳಿಕ  ನಡೆದಾಡಲು ಹಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗುವುದು.ಆದರೆ, ಅರುಣಿಮಾ, ಆಶ್ಚರ್ಯ ಎನ್ನುವಂತೆ ಕೇವಲ ಎರಡೇ ದಿನದಲ್ಲಿ ನಡೆಯಲು ಕಲಿತಿದ್ದರು..!

ಮಾನಸಿಕವಾಗಿ ದೃಢ ಆಲೋಚನೆ ಹಾಗೂ ಸಂಕಲ್ಪಗಳಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದನ್ನುಅರುಣಿಮಾ  ಸಿನ್ಹಾ ತೋರಿಸಿಕೊಟ್ಟಿದ್ದಾರೆ. ಇತರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಮತ್ತು ವಿಕಲಚೇತನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

 

 

 

 

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...