No menu items!
11.1 C
Munich
Wednesday, April 29, 2026

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

Must read

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ದೇವಿ ಕಾತ್ಯಾಯನಿ ಹಿನ್ನಲೆ ನೋಡೊದಾದ್ರೆ, ಮಹರ್ಷಿ ಕಾತ್ಯಾಯನ ಮಹಾತಪಸ್ವಿ. ಅವರ ತಪಸ್ಸಿನ ಫಲವಾಗಿ ದೇವಿಯು ಅವರ ಪುತ್ರಿಯಾಗಿ ಅವತರಿಸಿದರು. ಅಸುರರ ರಾಜ ಮಹಿಷಾಸುರನ ಸಂಹಾರಕ್ಕಾಗಿ ದೇವಿಯು ಕಾತ್ಯಾಯನಿ ರೂಪದಲ್ಲಿ ಪ್ರತ್ಯಕ್ಷಳಾದಳು. ಈಕೆ ದುರ್ಗೆಯ ಆರುನೇ ರೂಪ, ಶಕ್ತಿಯ ದೈಹಿಕ ಸೌಂದರ್ಯ, ಧೈರ್ಯ, ಶೌರ್ಯ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತ.

ಶ್ರೀಮತಿ (ಶ್ರೀಮಹಾಲಕ್ಷ್ಮಿ)ಯ ರೂಪವಾಗಿರುವ ಕಾರಣ ಭಕ್ತರಿಗೆ ಐಶ್ವರ್ಯ, ಧೈರ್ಯ ಮತ್ತು ಸುಖವನ್ನು ನೀಡುವಳು.

ಪೂಜಾ ವಿಧಾನ (ಪೂಜಾ ಕ್ರಮ)

  1. ಬೆಳಿಗ್ಗೆ ಸ್ನಾನ ಮಾಡಿ ಶುಭ ವಸ್ತ್ರ ಧರಿಸಬೇಕು (ಹಳದಿ/ಕೆಂಪು ಬಣ್ಣ ಶ್ರೇಯಸ್ಕರ).
  2. ಕಲಶ ಸ್ಥಾಪನೆ, ಗಣಪತಿ-ಕುಲದೇವತೆ ಪೂಜೆಯ ನಂತರ ದೇವಿ ಕಾತ್ಯಾಯನಿ ಅವಾಹನೆ ಮಾಡಬೇಕು.
  3. ದೇವಿಯನ್ನು ಕೆಂಪು ಹೂವುಗಳು, ಅಕ್ಕಿ, ಹಳದಿ ಹಣ್ಣುಗಳುಗಳಿಂದ ಆರಾಧಿಸಬೇಕು.
  4. ಧೂಪ, ದೀಪ, ನೈವೇದ್ಯ ಅರ್ಪಿಸಿ, ದೇವಿಗೆ ಮಂತ್ರ ಪಠಿಸಬೇಕು.
  5. ದಿನವಿಡೀ ಉಪವಾಸ, ಭಕ್ತಿಪೂರ್ವಕ ಪಾರಾಯಣ, ದುರ್ದಶಾ ನಿವಾರಣೆಯ ಪ್ರಾರ್ಥನೆ ಮಾಡಬೇಕು.
  6. ಸಂಜೆ ಆರತಿ, ಕುಂಕುಮಾರ್ಚನೆ, ಹೂಮಾಲೆಗಳಿಂದ ಅಲಂಕರಿಸಿ ಪೂರ್ಣಾಹುತಿ ಮಾಡಬೇಕು. ಮಂತ್ರ

ಸಾಮಾನ್ಯ ಜಪಮಂತ್ರ:
ಓಂ ದೇವೀ ಕಾತ್ಯಾಯನ್ಯೈ ನಮಃ।

ದೇವಿಯ ಧ್ಯಾನಮಂತ್ರ:
ಚಂದ್ರಹಾಸೋಜ್ವಲಾ ರಮ್ಯಾ ಚತುರಭುಜ ಧಾರಿಣೀ।
ಅಭಯಂ ವರದಾಂ ಚೈವ ದ್ವಾರಕಾನಾಥಮಿಷ್ಟದಾ॥

ಇಷ್ಟವಾದ ಹೂ

ಕೆಂಪು ಗುಲಾಬಿ

ಕೇಸರಿ ಬಣ್ಣದ ಹೂಗಳು

ಶೇವುಂತಿಗೆ (ಮರಿಗೋಲ್ಡ್)

ಬಣ್ಣ

ಕೆಂಪು ಹಾಗೂ ಚಿನ್ನದ ಅಂದರೇ ಸುವರ್ಣವರ್ಣ ಆಕೆಗೆ ಇಷ್ಟ. ಇನ್ನೂ ಇಂದು ಆಚರಣೆ ಮಾಡುವವರು ಕಂದು ಅಂದರೇ ಗ್ರೇ ಬಣ್ಣದ ಸೀರೆ ಉಡುವ ಪದ್ದತಿ ಇದೆ. ಕೆಲವಡೆ ಹಳದಿ ಬಣ್ಣವೂ ಶುಭಕರ ಎಂದು ಹೇಳಲಾಗಿದೆ.

ನೈವೇದ್ಯ (ಪ್ರಸಾದ)

ಜೇನು, ಗೋಧಿಹಿಟ್ಟು ತಯಾರಿಸಿದ ಸಿಹಿ. ಹಾಲು, ಮೊಸರು. ಜೇನು ಸೇರಿದ ಸಿಹಿ ಪದಾರ್ಥಗಳು. ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಸೇಬು

ಈ ಪೂಜೆಯಿಂದ ಲಭಿಸುವ ಪ್ರಯೋಜನಗಳು

ಕನ್ಯೆಯರ ವಿವಾಹ ಸಂಬಂಧಿತ ಅಡಚಣೆಗಳು ದೂರವಾಗುತ್ತವೆ. ಗೃಹಸ್ಥರಿಗೆ ಸಂತೋಷ, ಆರ್ಥಿಕ ಸಮೃದ್ಧಿ ಹಾಗೂ ಆರೋಗ್ಯ ದೊರೆಯುತ್ತದೆ. ಶತ್ರುಗಳು ನಾಶವಾಗಿ ಧೈರ್ಯ ಮತ್ತು ಶೌರ್ಯ ದೊರೆಯುತ್ತದೆ. ಭಕ್ತರ ಮನಸ್ಸಿಗೆ ಶಾಂತಿ, ಚೈತನ್ಯ ಮತ್ತು ಭಕ್ತಿ ಹೆಚ್ಚುತ್ತದೆ. ವಿದ್ಯಾ, ವಿವೇಕ, ಶಕ್ತಿ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

ನವರಾತ್ರಿ ಆರನೇ ದಿನ ದೇವಿ ಕಾತ್ಯಾಯನಿ ಪೂಜೆ ಮಾಡುವುದರಿಂದ ಶಕ್ತಿ, ಐಶ್ವರ್ಯ, ವಿವಾಹ ಯೋಗ, ಆರೋಗ್ಯ ಮತ್ತು ಧೈರ್ಯ ಲಭ್ಯವಾಗುತ್ತದೆ.

- Advertisement -spot_img

More articles

- Advertisement -spot_img

Latest article