ಬ್ರೇಕಪ್ ಮಾಡಿಕೊಳ್ಳೋ ಟೈಮ್ ಬಂದಿದೆ ಅನಿಸಿದ್ರೆ ಮಾತ್ರ ಇದನ್ನು ಓದಿ..! 

Date:

ಬ್ರೇಕಪ್ ಮಾಡಿಕೊಳ್ಳೋ ಟೈಮ್ ಬಂದಿದೆ ಅನಿಸಿದ್ರೆ ಮಾತ್ರ ಇದನ್ನು ಓದಿ..! 

ನೀವು ಯಾವುದೇ ಸಂಬಂಧ ತೆಗೆದುಕೊಳ್ಳಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ , ಗೌರವ ಅಗತ್ಯ. ‌ಯಾವ ಸಂಬಂಧದಲ್ಲಿ ಇವುಗಳ ಕೊರತೆ ಕಂಡುಬರುತ್ತದೆಯೋ ಅಂಥಾ ಸಂಬಂಧವನ್ನು ಮುರಿದು ಕೊಳ್ಳುವುದೇ ಉತ್ತಮ .

ನೀವು ನಿಮ್ಮ ಸಂಬಂಧ ಮುರಿದುಕೊಳ್ಳಲೇ ಬೇಕಾದ ಅನಿವಾರ್ಯತೆ ನಿಮಗಾಗಿ ಅವಶ್ಯಕ ಎಂದು ಮನಗಾಣುವುದು ಹೇಗೆ? ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆಯಾ? ಅದಕ್ಕೆ ಇಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇವೆ.

 

ಪದೇ ಪದೇ ನಿಂದನೆ : ಯಾವುದೇ ಆರೋಗ್ಯಕಾರಿಯಾದ  ಸಂಬಂಧವೆಂದರೆ ಅಲ್ಲಿ ಪರಸ್ಪರ ಗೌರವ  ಕಾಳಜಿ ಇರಬೇಕು‌. ಪದೇ ಪದೇ ದೈಹಿಕ ಹಿಂಸೆ ಮಾನಸಿಕ ಹಿಂಸೆ ಆಗುತ್ತಿದ್ದರೆ ನಿಮ್ಮನ್ನು ಯಾವಾಗಲೂ ಭಾವನೆಗಳಿಗೆ ನೋವುಂಟಾಗುವ ಹಾಗೆ ಮಾಡ್ತಿದ್ರೆ ಅಂಥಾ ಸಂಬಂಧದಿಂದ ಹೊರಬರುವುದೇ ಉತ್ತಮ.

 

ಮನೆಯಲ್ಲಿ, ಸ್ನೇಹಿತರಿಗೆ ಗೊತ್ತಿರದೆ ರಹಸ್ಯ ಕಾಪಾಡುತ್ತಿದ್ದರೆ : ನಿಮ್ಮವನು ನಿಮ್ಮ ಪರಿಚಯವನ್ನು ಮನೆಯಲ್ಲಿ ಮಾಡಿಕೊಡದೆ, ಸ್ನೇಹಿತರಿಗೂ ಪರಿಚಯ ಮಾಡಿಕೊಡದೆ ರಹಸ್ಯವಾಗಿಯೇ ನಿಮ್ಮೊಡನೆ ಸಂಬಂಧ ಹೊಂದಿದ್ದರೆ ನೀವು ಅವನ ಜೀವನದ ರಹಸ್ಯ ಮಾತ್ರ…! ಅಂಥಾ ಸಂಭಂದ ನಿಮಗೆ ಮುಂದೆ ಮುಳು ಆಗಬಹುದು.

ಕಾರ್ಯಕ್ರಮ ಬದಲಾವಣೆ : ಶಾಪಿಂಗ್, ಮೂವಿ ಅಥವಾ ಯಾವ್ದಾದ್ರು ಕಾರ್ಯಕ್ರಮಕ್ಕೆ ಹೋಗೋ ಪ್ಲ್ಯಾನ್ ಮಾಡಿಕೊಂಡಿರುವಾಗ ಪದೇ ಪದೇ  ಏನಾದರೂ ಕಾರಣ ಹೇಳಿ ನಿಮ್ಮವ ತಪ್ಪಿಸಿಕೊಳ್ಳುತ್ತಿದ್ದರೆ ಅವರಿಗೆ ನಿಮ್ಮನ್ನು ಆಚೆ ಕರೆದುಕೊಂಡು ಹೋಗಲು, ನಿಮಗಾಗಿ ಸಮಯ ಮೀಸಲಿಡಲು ಆಗದಿದ್ದರೆ ಅವರಿಗೆ ನೀವು ಏನೂ ಅಲ್ಲ, ನಿಮ್ ಸಂಬಂಧ ಬೇಡ ಎಂದೇ ಅರ್ಥ… ಇನ್ನು ತೀರ್ಮಾನ ನಿಮ್ಮದು..

ನಂಬಿಕೆಗೆ ಅರ್ಹವಾಗಿರದಿದ್ದರೆ : ಸಂಬಂಧಗಳಲ್ಲಿ ಮುಖ್ಯವಾಗಿ ಬೇಕಾಗುವುದೇ ನಂಬಿಕೆ . ಆ ನಂಬಿಕೆ ಇಲ್ಲದಿದ್ದರೆ ಅಥವಾ ಅವರು ನಿಮ್ಮ ನಂಬಿಕೆಗೆ ಅರ್ಹರಲ್ಲದೆ ಇದ್ದರೆ ನೀವು ಸಂಬಂಧ ಕಡಿದುಕೊಳ್ಳುವುದೇ ಲೇಸು.

ಆಯ್ಕೆಗಳು ವಿಭಿನ್ನ : ನಿಮ್ಮ ಆಯ್ಕೆಗೂ ಅವರ ಆಯ್ಕೆಗಳಿಗೂ ಬಹಳ ವಿಭಿನ್ನತೆ ಇದ್ದರೆ,‌ನಿಮ್ಮ ಯೋಚನೆಗಳಿಗೂ ಅವತ ಯೋಚನೆಗಳಿಗೂ ಬಹಳ ವ್ಯತ್ಯಾಸವಿದ್ದರೆ ನೀವು ದೂರ ಆಗುವುದೇ ಒಳ್ಳೆಯದು ಎಂದು ಅರ್ಥ

 

ಕೆಟ್ಟ ಪದ ಬಳಕೆ ಜಗಳ :

ಜಗಳಗಳು ಕಾಮನ್…ಆದ್ರೆ ಜಗಳ ಆಡುವಾಗ ತೀರ ಕೆಟ್ಟ , ಅಶ್ಲೀಲ ಪದಗಳ ಬಳಕೆ ಮಾಡಿ ನಿಮ್ಮನ್ನು ನಿಂದಸುತ್ತಿದ್ದರೆ, ನಿಮಗೆ ನೋವುಂಟು ಮಾಡುತ್ತಿದ್ದರೆ ಅವರನ್ನು ದೂರವಿಡಿ.

ಹೊಟ್ಟೆಕಿಚ್ಚು , ಸಂಶಯ : ನಿಮ್ಮ ಕಷ್ಟ ಸುಖಕ್ಕೆ ಆಗದೆ , ನಿಮ್ಮ ಶ್ರೇಯಾಭಿವೃದ್ಧಿಯನ್ನು ಸಹಿಸದೆ ಹೊಟ್ಟೆ ಕಿಚ್ಚು ತೋರುತ್ತಿದ್ದರೆ, ನಿಮ್ಮ ಮೇಲೆ ಸಂಶಯ ಪಡುತ್ತಿದ್ದರೆ ದೂರಾಗುವುದೇ ಒಳ್ಳೆಯದೇ…

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...