ಒಂದೇ ಹುಡುಗನ್ನ ಇಂಪ್ರೆಸ್ ಮಾಡಲು ಹೊರಟ್ರು ಇಬ್ಬರು ಯುವತಿಯರು.. ಮುಂದೇನಾಯ್ತು..?

Date:

ಸಾಮಾನ್ಯವಾಗಿ ರಿಯಾಲಿಟಿ ಶೋ ಅಂದ್ರೆನೆ ಅದು ಬರೀ ಹೊಡೆದಾಡ್ಕೊಳ್ಳೋದು, ಜಗಳವಾಡೋದು ಬೈದುಕೊಳ್ಳೋದಂತಲೇ ಜನ್ರ ತಲೇಲಿ ಫಿಕ್ಸ್ ಆಗಿ ಹೋಗ್ಬಿಟ್ಟಿದೆ.. ರಿಯಾಲಿಟಿ ಶೋಗಳಲ್ಲಿ ಹುಡ್ಗ ಹುಡ್ಗಿ ಲವ್ ಮಾಡೋದು, ಒಂದೇ ಹುಡ್ಗನ್ನ ಇಬ್ಬರು ಹುಡ್ಗೀರು ಗಾಳ ಹಾಕೋದು ಇವೆಲ್ಲಾ ಸಾಮಾನ್ಯ.. ಆದ್ರೆ ಗಾಳ ಹಾಕಿದ ಇಬ್ಬರು ಯುವತಿಯರೇ ಒಬ್ಬರನ್ನೊಬ್ಬರು ಪ್ರೀತಿ ಮಾಡ್ಬಿಟ್ರೆ ಹೇಗಿರತ್ತೆ ಅಲ್ವಾ..? ಅಂತಹದ್ದೇ ಒಂದು ಘಟನೆಯೊಂದು ವರದಿಯಾಗಿದೆ ನೋಡಿ..! ಆಸ್ಟ್ರೇಲಿಯಾದ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗ್ತಾ ಇದ್ದ ರಿಯಾಲಿಟಿ ಶೋ ಒಂದರಲ್ಲಿ ಇಬ್ಬರು ಮಾಡೆಲ್‍ಗಳು ಒಬ್ಬ ಹುಡುಗನಿಗೆ ಬುಟ್ಟಿಗೆ ಹಾಕಿಕೊಳ್ಳೊ ಬರದಲ್ಲಿ ಈ ಇಬ್ಬರು ಯುವತಿಯರೇ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಾರೆ ನೋಡ್ರಪ್ಪ..! ಆಸ್ಟ್ರೇಲಿಯಾದ ಮಾಡೆಲ್‍ಗಳಾದ ಮೇಗನ್ ಮಾರ್ಕ್ಸ್ ಹಾಗೂ ಟಿಫಾನಿ ಸ್ಕ್ಯಾನ್‍ಲನ್ ಆಸ್ಟ್ರೇಲಿಯಾದ ದಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಈ ಶೋನಲ್ಲಿ ಸ್ಪರ್ಧಾಳುಗಳಾಗಿ ಬಂದಿದ್ದ ಐದು ಯುವತಿಯರು ಒಬ್ಬ ಯುವಕನಿಗೆ ಇಂಪ್ರೆಸ್ ಮಾಡುವ ಟಾಸ್ಕ್ ಕೋಟ್ಟಿದ್ರು ನೋಡಿ.. ಇದೇ ವೇಳೆ ಆತನನ್ನು ಇಂಪ್ರೆಸ್ ಮಾಡಲು ಸೆಣಸಾಟ ನಡೆಸಿದ ಐವರಲ್ಲಿ ಇಬ್ಬರು ತಾವೇ ಪ್ರೀತಿ ಮಾಡಲು ಶುರು ಹಚ್ಕೊಂಡ್ಬಿಟ್ಟಿದಾರೆ..! ಬ್ಯಾಚುಲರ್ ಕಾರ್ಯಕ್ರಮದಿಂದ ಹೊರ ಬಂದ 27 ವರ್ಷದ ಮೇಗನ್ ಹಾಗೂ 30 ವರ್ಷದ ಟಿಫಾನಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಟಿಫಾನಿ ಬರ್ತ್‍ಡೇ ದಿನದಂದು ತಮ್ಮಿಬ್ಬರ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಮೇಗನ್, ಪೋಸ್ಟ್ ನ ಕೆಳಗೆ ಹಾಪಿ ಬರ್ತ್ ಡೇ ಟಿಫಾನಿ… ಐ ಲವ್ ಯೂ ಎಂದಿದ್ದಾಳೆ.. ಅದಕ್ಕೆ ಪ್ರತ್ಯುತ್ತರವಾಗಿ ಟಿಫಾನಿ ಐ ಲವ್ ಮೇಗನ್ ಸೋ ಮಚ್ ಎಂದಿದ್ದಾಳೆ..!

 

Like us on Facebook  The New India Times

POPULAR  STORIES :

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...