ರೀ ರಿಲೀಸ್ ಆಗಲಿದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ.! ಇದರಿಂದ ಬರುವ ದುಡ್ಡಿನಲ್ಲಿ‌ ನಡೆಯಲಿದೆ ಈ ಮಹತ್ಕಾರ್ಯ.!

Date:

ರೀ ರಿಲೀಸ್ ಆಗಲಿದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ..!! ಇದರಿಂದ ಬರುವ ದುಡ್ಡಿನಲ್ಲಿ‌ ನಡೆಯಲಿದೆ ಈ ಮಹತ್ಕಾರ್ಯ..!!

ಇಂದು ಸೂರ್ಯಾಸ್ತದ ಸಮಯಕ್ಕೆ ಕರುನಾಡಿನ ಕರ್ಣನ ಯುಗಾಂತ್ಯವಾಯಿತು.. ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದ, ಗೆಳೆಯರ ದೊಡ್ಡ ಬಳಗವನ್ನ ಹೊಂದಿದ್ದ, ಅಂಬಿ ಅವರು ಇಂದು ಪಂಚಭೂತಗಳಲ್ಲಿ ಲೀನವಾಗಿ ಹೋದ್ರು.. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಸೇರಿದಂತೆ ಕುಟುಂಬ ವರ್ಗದ ನೋವು ಎಂತಹ ಕಲ್ಲು ಹೃದಯವನ್ನು ನೀರಾಗಿಸಿತ್ತು..

ಈ ನಡುವೆ ಪೂರ್ಣ ಪ್ರಮಾಣದಲ್ಲಿ ಅಂಬಿ ನಟಿಸಿದ್ದ ಈ ಹಿಂದಿನ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋವನ್ನ ಮತ್ತೆ ರೀ ರಿಲೀಸ್ ಮಾಡುವಂತೆ ದೇಶವಿದೇಶದಲ್ಲಿನ ಅಭಿಮಾನಿಗಳು ಒತ್ತಾಯ ಪಡೆಸಿದ್ದಾರೆ.. ಹೀಗಾಗೆ ಈ ಸಿನಿಮಾದ ನಿರ್ಮಾಪಕರಾದ ಜಾಕ್ ಮಂಜು ಮತ್ತೆ ಚಿತ್ರವನ್ನ ಬಿಡುಗಡೆ ಮಾಡಲು ಮನಸು ಮಾಡಿದ್ದಾರೆ..

ಇನ್ನು ಈ ಸಿನಿಮಾ‌ ಪ್ರದರ್ಶನದಿಂದ‌ ಬಂದ‌ ಹಣವನ್ನ‌ ಬಡವರ ಕಲ್ಯಾಣಕ್ಕಾಗಿ‌ ಬಳಸಲು ಯೋಚಿಸಿದ್ದಾರೆ ಎನ್ನಲಾಗಿದೆ.. ಅಂಬರೀಶ್ ಅವರೆಂದರೆ ತಮ್ಮ‌ ಕೊಡುಗೈ ದಾನಕ್ಕೆ‌ ಹೆಸರುವಾಸಿಯಾದವರು.. ಹೀಗಾಗೆ ಇವರ ಸಿನಿಮಾದಿಂದ ಬಂದ ಹಣವನ್ನ‌ ಬಡವರ ಪಾಲಿಗೆ ಮೀಸಲಿಡಲ್ಲಿದ್ದಾರಂತೆ..

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...