‘ಅಂದುಕೊಂಡಂತೆ’ ಶಿವಣ್ಣ ಅವರಿಂದಲೇ ಫಸ್ಟ್​ಲುಕ್ ರಿಲೀಸ್!

Date:

ಹೊಸಬರು ‘ಅಂದುಕೊಂಡಂತೆ’ ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರಿಂದ ಫಸ್ಟ್​ ಲುಕ್ ಬಿಡುಗಡೆ ಮಾಡಿಸಿದ್ದಾರೆ. ಯಾರು ಆ ಹೊಸಬರು ಅಂದ್ರಾ? ಅದೇ ‘ಅಂದುಕೊಂಡಂತೆ’ ಸಿನಿಮಾ ತಂಡ!
ಹೌದು ಶಿವರಾಜ್​ಕುಮಾರ್ ‘ಅಂದುಕೊಂಡಂತೆ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಪ್ರಮೋದ್​​​ ಬೋಪಣ್ಣ ನಾಯಕ ನಟರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಿಷಿ ಭಟ್ ನಾಯಕಿ. ಇನ್ನುಳಿದಂತೆ ಲೋಕೇಶ್, ಲೋಹಿತ್ ಗೌಡ, ಕಿರಣ್, ವಿನಯ್ ರಾಜ್​ ಕೂಡ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ರುತ್ ರಾಜ್​,ಎಂ ಡಿ ಕೌಶಿಕ್, ಉಗ್ರಂ ರೆಡ್ಡಿ, ಗಿರೀಶ್ ಜತ್ತಿ, ರಾಜು ಹೆಮ್ಗೆಪುರ, ಡಾಡನ್ ಬಾಬು ಮೊದಲಾದದವರು ತಾರಾಗಣದಲ್ಲಿದ್ದಾರೆ. ಯುವ ನಿರ್ದೇಶಕ ಶ್ರೇಯಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ. ಅಲ್ಲದೆ ಶ್ರೇಯಸ್ ಮತ್ತು ರಮೇಶ್ ಕೊಯಿರಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಅನಂತ ಕಾಮತ್ ಸಂಗೀತ, ರಮೇಶ್ ಕೊಯಿರ ಛಾಯಾಗ್ರಹಣ ಬಲವಿದೆ. ಕಿರಣ್ ಕುಮಾರ್ ಜಿ ಸಂಕಲನದ ಹೊಣೆ ನಿಭಾಯಿಸುತ್ತಿದ್ದು, ಚೇತನ್ ಅನಿಕೇತ್ ಸಾಹಿತ್ಯವಿದೆ. ‘ಅಂದುಕೊಂಡಂತೆ’ ಟೀಮ್​ಗೆ ‘ಅಂದುಕೊಂಡಂದ್ದಕ್ಕಿಂತ ಹೆಚ್ಚಿನ ಯಶಸ್ಸು ಸಿಗಲಿ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...