ಅನ್ವೇಷಿ ಬಗ್ಗೆ ತಾರಕ ರತ್ನ ಹೇಳಿದ್ದೇನು…?

Date:

ರಘುಭಟ್, ತಿಲಕ್ ಶೇಖರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಅನ್ವೇಷಿ’ ಬಗ್ಗೆ ತೆಲುಗು ನಟ ನಂದಮೂರಿ ತಾರಕ ರತ್ನ ಶುಭಕೋರಿದ್ದಾರೆ.

ಇದೇ 8ರಂದು ತೆರೆಕಾಣಲಿರುವ ಅನ್ವೇಷಿ ಸಿನಿಮಾದ ಟ್ರೇಲರ್ ನೋಡಿರುವ ತಾರಕ ರತ್ನ, ಟ್ರೇಲರ್ ನೋಡಿದ್ದೇನೆ. ಸಿನಿಮಾದ ಬಗ್ಗೆ ನನಗೂ ಕುತೂಹಲವಿದೆ. ನನ್ನ ಗೆಳೆಯರಾದ ರಘುಭಟ್, ತಿಲಕ್ ಅಭಿನಯದ ಚಿತ್ರ. 100% ಮನರಂಜನೆ ನೀಡುತ್ತೆ ಎನ್ನುವ ಭರವಸೆ ನನ್ನದು. ಸಿನಿಮಾವನ್ನು ಮಿಸ್ ಮಾಡ್ದೇ ನೋಡಿ ಎಂದು ಹೇಳಿದರು.


ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟನೇ ತಾರೀಕಿನ ತನಕ ನಾನಿಲ್ಲೇ ಇದ್ದರೆ ಖಂಡಿತಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಇಲ್ಲವಾದ್ರೆ ಖಂಡಿತಾ ಸಿನಿಮಾವನ್ನು ತರಿಸಿಕೊಂಡು ನೋಡುವೆ ಎಂದರು.
ತಿಲಕ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ರ್ಯಾಗಿಂಗ್ ಅನಾಹುತಗಳ ಒಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಒಂದೊಳ್ಳೆ ಮೆಸೇಜ್ ಇದೆ. ಥೀಯೇಟರಿಗೆ ಬಂದ ನಿಮಗೆ ಖಂಡಿತಾ ಮನರಂಜನೆ ಸಿಗುತ್ತೆ. ನೀವು ಕೊಟ್ಟ ದುಡ್ಡಿಗೆ ಮೋಸವಿಲ್ಲ ಎಂದು ಹೇಳಿದರು.


ರಘುಭಟ್ ಮಾತನಾಡಿ, ರಾಜ್ಯದ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಹಾರರ್ ಕಮರ್ಷಿಯಲ್ ಮೂವಿ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ. ನಿಮಗೆ ಸಿನಿಮಾ ಇಷ್ಟವಾಗುತ್ತೆ. ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮಮೇಲಿರಲಿ ಎಂದರು.
ನಾಯಕ ನಟಿ ದಿಶಾ ಪೂವಯ್ಯ ಮಾತನಾಡಿ, ರಘುಭಟ್ ಅವರ ಜೊತೆ ನಟಿಸಿರುವ ಮೊದಲ ಸಿನಿಮಾ ಇದು. ಕಾಲೇಜು ಲೈಫ್, ಲವ್ ಎಲ್ಲವೂ ಸಿನಿಮಾದಲ್ಲಿದೆ. ರ್ಯಾಗಿಂಗ್ ಅನಾಹುತದ ಬಗ್ಗೆ ಮೆಸೇಜ್ ಇದೆ. ಏನು? ಹೇಗೆ ಎನ್ನೋದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಹೇಳಿದ್ರು.


ಅನ್ವೇಷಿ ವೇಮುಗಲ್ ಜಗನ್ನಾಥ್ ರಾವ್ ನಿರ್ದೇಶನದ ಚಿತ್ರ. ವಿ.ಜಯರಾಂ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ದಿಶಾ ಪೂವಯ್ಯ ಅವರಲ್ಲದೆ ರಮ್ಯಾ ಬಾರ್ನ, ಅನಿ ಅಗರ್ ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...