ಬದು”ಕಾಟ”ದ ನೋಟ

Date:

ಬದುಕೆಂಬ ಹೆಸರೇ ಕೆಸರು
ಉಸಿರಾಟದ ಬಸಿರಲ್ಲಿ
ಜಗದ ಜಾತ್ರೆಗೆ ಜಾರಿ
ಜೀವನದ ಜಂಜಾಟದ
ಜೋಳಿಗೆಯ ಹಿಡಿದು
ನಿಲ್ಲದೋಟವ ಬಾಚಿ ತಬ್ಬಿ
ಯೋಚನೆಯಲೇ ಯೋಜನೆಯ ರೂಪಿಸಿ
ವಿವೇಚನೆಯ ತಡೆಗೋಡೆಗೆ
ಕಾಮ-ಕ್ರೋಧಗಳ ತೂಗಿಹಾಕಿ
ಉರುಳು ಕೊರಳ ಸುತ್ತಿದಾಗಲೂ
ನಗುವ ಅಲೆಯು ಕನ್ನಡಿಯಲೇ ತೇಲಿ
ತನ್ನದೆಯ ಒಂಟಿ ನೋವ
ಸೋಸಿ ತೆಗೆಯುವ ಹೊತ್ತಿಗೆ
ಈ ಜಗದ ಗುತ್ತಿಗೆ ಮುಗಿಯುವುದು
ಹೊಸಚಿಗುರು ಅರಳುವುದು
ಮತ್ತೆ ಮತ್ತೆ ಬದುಕಿನ ಆಟದಲೇ
ಮುಳುಗುವುದು ಕಾವ್ಯದತ್ತ.?

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...