ರಾಜ್ಯದ ಜನರಿಗೆ ಪರಿಸರ ಮಾಲಿನ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹರಿಯಾಣದ ಮುಖ್ಯಮಂತ್ರಿ ಲಾಲ್ ಖತ್ತರ್ ಹಾಗೂ ಮಂತ್ರಿ ಮಂಡಲದ ಎಲ್ಲಾ ಶಾಸಕರು ಬುಧವಾರ ಸೈಕಲ್ ಏರಿ ಶಾಸಕರ ಭವನಕ್ಕೆ ತೆರಳಿದ್ದರು..!
62 ವರ್ಷದ ಲಾಲ್ ಖತ್ತರ್ ಅವರು ತಮ್ಮ ಶಾಸಕರೊಂದಿಗೆ ಸುಮಾರು ಒಂದು ಕಿ.ಮೀ ದೂರದವರೆಗೆ ಸೈಕಲ್ ಸವಾರಿ ಮಾಡಿಕೊಂಡು ಕೊನೆಗೆ ಶಾಸಕರ ಭವನಕ್ಕೆ ತೆರಳಿದ್ದರು. ಇನ್ನು ತಮ್ಮ ಪಕ್ಷದಲ್ಲಿದ್ದ ಮಹಿಳಾ ಶಾಸಕರು ಇ-ರಿಕ್ಷಾ ಸೇವೆಯ ಮೂಲಕ ಇವರೂ ಕೂಡ ಪರಿಸರ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಂತರ ಸುದ್ದಿಗಾರರ ಕುರಿತು ಮಾತನಾಡಿದ ಸಿಎಂ, ಜನರು ಹೆಚ್ಚು ಹೆಚ್ಚು ಪರಿಸರ ಸ್ನೇಹಿ ವಾಹನಗಳನ್ನು ಬಳಸಬೇಕು ಎಂದು ಹೇಳಿದ ಅವರು ಸೈಕಲ್ ಕೇವಲ ಪರಿಸರ ಮಾಲಿನ್ಯವನ್ನು ಮಾತ್ರ ತಡೆಯುವುದಲ್ಲದೇ ಮಾನವನ ಆರೋಗ್ಯಕ್ಕೂ ಬಹಳ ಉಪಯೋಗಕಾರಿ ಎಂದು ಹೇಳಿದರು.
ಈ ಹಿಂದೆ ಹರಿಯಾಣದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಶಾಸಕ ಪವನ್ ಕುಮಾರ್ ಶೈನಿ ಅವರು ಕುರುಕ್ಷೇತ್ರ ಜಿಲ್ಲೆಯಿಂದ ಛಂಡಿಗಡ್ ವರೆಗೆ ಸುಮಾರು 110ಕಿಮಿ ಸೈಕಲ್ ಸವಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
POPULAR STORIES :
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.
18 ವರ್ಷ ತುಂಬುದ್ರೆ 37 ಸಾವಿರ ಆಫರ್…!
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!