ಲೋಕಲ್ ಫೈಟ್; ಗೆದ್ದೋರ್ ಯಾರು? ಬಿದ್ದೋರ್ ಯಾರು?

Date:

ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ.‌

ತುಮಕೂರು , ಶಿವಮೊಗ್ಗ ಪಾಲಿಕೆ ಸೇರಿ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್ ಸೇರಿ‌105 ಸಂಸ್ಥೆಗಳಿಗೆ‌ ಚುನಾವಣೆ ನಡೆದಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ‌
ಒಟ್ಟು 2,527 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 946, ಬಿಜೆಪಿ 875, ಜೆಡಿಎಸ್ 345, ಪಕ್ಷೇತರರು 315, ಎಸ್‍ಡಿಪಿಐ 17, ಬಿಎಸ್‍ಪಿ 12, ಕೆಪಿಜೆಪಿ 10, ಎಸ್‍ಪಿ 4, ಕೆಆರ್‍ಆರ್‍ಎಸ್ 1, ನ್ಯೂ ಇಂಡಿಯನ್ ಕಾಂಗ್ರೆಸ್ 1, ಡಬ್ಲ್ಯೂಪಿಐ 1ರಲ್ಲಿ ವಿಜಯದ ನಗೆ ಬೀರಿವೆ.
ಮಹಾನಗರ ಪಾಲಿಕೆ:
ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಒಟ್ಟು 135 ವಾರ್ಡ್ ಗಳಲ್ಲಿ ಬಿಜೆಪಿ 54, ಕಾಂಗ್ರೆಸ್ 36, ಜೆಡಿಎಸ್ 30, ಪಕ್ಷೇತರರು 14, ಬಿಎಸ್‍ಪಿ 1 ವಾರ್ಡ್ ನಲ್ಲಿ ಜಯಗಳಿಸಿವೆ. . ಮೈಸೂರು ಮತ್ತು ತುಮಕೂರಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಶಿವಮೊಗ್ಗ ಪಾಲಿಕೆಯನ್ನು ಬಿಜೆಪಿ ಗೆದ್ದುಕೊಂಡಿದೆ.

ನಗರ ಸಭೆ ಚುನಾವಣೆ:
ಒಟ್ಟು 926 ವಾರ್ಡ್ ಗಳಲ್ಲಿ ಬಿಜೆಪಿ 370, ಕಾಂಗ್ರೆಸ್ 294, ಜೆಡಿಎಸ್ 106, ಪಕ್ಷೇತರ 123, ಬಿಎಸ್‍ಪಿ 10, ಎಸ್‍ಡಿಪಿಐ 13, ಕೆಪಿಜೆಪಿ 10 ವಾರ್ಡ್ ನಲ್ಲಿ ಗೆದ್ದಿವೆ. ಒಟ್ಟು 29 ನಗರಸಭೆಗಳ ಪೈಕಿ ಬಿಜೆಪಿ 9 ರಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ 5 ಕಡೆ, ಜೆಡಿಎಸ್ 2 ಕಡೆ ಸ್ವತಂತ್ರವಾಗಿ ಗದ್ದುಗೆ ಏರಲಿದೆ. ಗೋಕಾಕ್‍ನಲ್ಲಿ ಇತರರು ಕ್ಲೀನ್ ಸ್ವೀಪ್ ಮಾಡಿದ್ದಾರೆ. 13 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಪುರಸಭೆ ಚುನಾವಣೆ:
ಒಟ್ಟು 1246 ವಾರ್ಡ್ ಗಳಲ್ಲಿ ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210, ಪಕ್ಷೇತರರು 135, ಬಿಎಸ್‍ಪಿ 2, ಎಸ್‍ಡಿಪಿಐ 4, ಕೆಆರ್‍ಆರ್‍ಎಸ್ 1, ಎಸ್‍ಪಿ 4, ಡಬ್ಲ್ಯೂಪಿಐ 1ರಲ್ಲಿ ಜಯಗಳಿಸಿದೆ. ಒಟ್ಟು 53 ಪುರಸಭೆಯಲ್ಲಿ ಕಾಂಗ್ರೆಸ್ 18, ಬಿಜೆಪಿ 11, ಜೆಡಿಎಸ್ 8 ಕಡೆ ಗೆದ್ದುಕೊಂಡಿದ್ದು 16 ಪುರಸಭೆ ಅತಂತ್ರವಾಗಿದೆ.
ಪಟ್ಟಣ ಪಂಚಾಯತ್:
ಒಟ್ಟು 355 ವಾರ್ಡ್ ಗಳ ಕಾಂಗ್ರೆಸ್ 138, ಬಿಜೆಪಿ 130, ಪಕ್ಷೇತರರು 57, ಜೆಡಿಎಸ್ 29, ಇಂಡಿಯನ್ ನ್ಯೂ ಕಾಂಗ್ರೆಸ್ 1ರಲ್ಲಿ ಗೆದ್ದಿದೆ. ಒಟ್ಟು 20 ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 7, ಬಿಜೆಪಿ 7, ಜೆಡಿಎಸ್ 2 ಕಡೆ ಗೆದ್ದುಕೊಂಡಿದೆ. 3 ಪಟ್ಟಣ ಪಂಚಾಯ್ತಿಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...