ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಗೆಳೆಯರಾದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ಗೆ ಸವಾಲಾಕ್ಕಿದ್ದಾರೆ..! ಗಣೇಶ್ ಹಾಕಿರೋ ಚಾಲೆಂಜ್ ಅನ್ನು ದಿಗಂತ್ ಹಾಗೂ ಪ್ರಜ್ವಲ್ ಯಾವರೀತಿ ಸ್ವೀಕರಿಸ್ತಾರೆ..? ಗಣೇಶ್ ಹಾಕಿರೋ ಚಾಲೆಂಜ್ನಲ್ಲಿ ಇವರಿಬ್ಬರು ಗೆಲ್ತಾರ ಅನ್ನೋ ಕುತೂಹಲವೀಗ ಅಭಿಮಾನಿಗಳದ್ದು..!
ನಿಮ್ಗೆ ಈಗಾಗಲೇ ಗೊತ್ತಿರುವಂತೆ ಗಣೇಶ್ ಮೂರು ತಿಂಗಳುಗಳಿಂದ ಮುವಾಯ್ ಥಾಯ್ ಕಲಿತಿದ್ದಾರೆ. ಅಷ್ಟೇ ಅಲ್ದೆ ಇವರು ಇದೀಗ ಮುವಾಯ್ ಥಾಯ್ ಗೆ ಭಾರತೀಯ ರಾಯಭಾರಿಯೂ ಹೌದು. ಗಣೇಶ್ ಮುವಾಯ್ ಥಾಯ್ ಕಲೆಯಿಂದ ಕಲ್ಲಂಗಡಿಯನ್ನು ಕಿಕ್ ಮಾಡಿ ಚೂರ್ ಚೂರ್ ಮಾಡಿದ್ದಾರೆ..! ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಪ್ರಜ್ವಲ್ ಹಾಗೂ ದಿಗಂತ್ಗೆ ಇವರು ಒಡೆದಿರುವಂತೆಯೇ ಕಲ್ಲಂಗಡಿಯನ್ನು ಒಡೆಯುವಂತೆ ಚಾಲೆಂಜ್ ಮಾಡಿದ್ದಾರೆ..! ಅಭಿಮಾನಿಗಳು, ಫ್ರೆಂಡ್ಸ್ಗೆ ಕಲ್ಲಂಗಡಿ ಒಡೆಯಲು ಆಗದೇ ಇದ್ರೆ ವಾಟರ್ ಬಲೂನ್ ಒಡೆದು ನನಗೆ ಕಳುಹಿಸಿ ಎಂದಿದ್ದಾರೆ.