11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

Date:

ಸುದ್ದಿ ಹಳೆಯದೇ..ಆದರೆ ನಿಜಕ್ಕೂ ಸ್ಪೂರ್ತಿದಾಯಕ..! ನೀವು ಈ ಮೊದಲೇ ಈ ಸ್ಟೋರಿಯನ್ನು ಎಲ್ಲೋ ಓದಿದ್ದರೆ ಸಂತೋಷ, ಓದದೇ ಇದ್ದರೆ ಈಗ ಓದ್ತಾ ಇದ್ದೀರಂತ ಖುಷಿ ಪಡಿ..! ಎರಡೇ ಎರಡು ನಿಮಿಷ ಬಿಡು ಮಾಡ್ಕೊಂಡು ಈ ಸ್ಟೋರಿ ಓದಿದ್ರೆ ಖಂಡಿತಾ ವಿಶ್ವದ ಮೂಲೆ ಮೂಲೆಗೂ ಸ್ಟೋರಿ ತಲುಪುವಂತೆ ಶೇರ್ ಮಾಡಿಯೇ ಮಾಡ್ತೀರ..! ಕಾರಣ, ಇದು 11 ವರ್ಷದ ಭಾರತೀಯ ಪುಟ್ಟ ಹುಡುಗನ ಸಾಹಸ..!
ಈ ಸಾಹಸಿ ಬಾಲಕನ ಹೆಸರು ಓಂ ಪ್ರಕಾಶ್..! ರಾಜಸ್ತಾನ್ದ ರೈತರೊಬ್ಬರ ಮಗ. ಅದು 2010 ಸೆಪ್ಟೆಂಬರ್04. ಹನ್ನೊಂದು ವರ್ಷದ ಹುಡುಗ ಓಂ ಪ್ರಕಾಶ್ ಹಾಗೂ ಅವನ ಸಹಪಾಠಿಗಳು ಮಾರುತಿ ವ್ಯಾನ್ನಲ್ಲಿ ಶಾಲೆಗೆ ಹೋಗ್ತಾ ಇರ್ತಾರೆ. ಆಗ ಇದ್ದಕ್ಕಿದ್ದಂತೆ ಹಠಾತ್ ವ್ಯಾನಿಗೆ ಬೆಂಕಿ ಹತ್ತುತ್ತೆ..! ಶಾರ್ಟ್ ಸರ್ಕ್ಯೂಟ್ ನಿಂದ ಅಪಘಾತ ಸಂಭವಿಸುತ್ತಿದ್ದಂತೇ ಕಾರಿನ ಚಾಲಕ ತಡಮಾಡದೇ ತನ್ನ ಕಡೆಯ ಡೋರ್ ಅನ್ನು ತೆಗೆದು ಅಲ್ಲಿಂದ ಕಾಲ್ಕೀಳುತ್ತಾನೆ..! ಮಕ್ಕಳನ್ನು ಕಾಪಡಲು ಪ್ರಯತ್ನಿಸದೇ ತನ್ನ ಪ್ರಾಣವನ್ನು ಉಳಿಸಿಕೊಳ್ಳೋಕೆ ಓಡ್ತಾನೆ..! ಆದರೆ ಹನ್ನೊಂದರ ಪೋರ ಪ್ರಕಾಶ್ ಹಾಗೆ ಮಾಡಲ್ಲ..! ತನ್ನ ಜೀವವವನ್ನೇ ಒತ್ತೆಯಾಗಿಟ್ಟು ಜೊತೆಗಾರರಜೀವ ಉಳಿಸ್ತಾನೆ..! ವ್ಯಾನ್ನ ಬಾಗಿಲನ್ನು ಮುರಿದು ಬೇರೆ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರ ದಬ್ಬುತ್ತಾನೆ..! ಬೇರೆ ವಿದ್ಯಾರ್ಥಿಗಳನ್ನು ಕಾಪಾಡುವಾಗ ಈತ ಮುಖ ಮತ್ತು ಹಿಂಬದಿಗೆ ಬೆಂಕಿ ತಗುಲುತ್ತೆ..! ಅದನ್ನೂ ಲೆಕ್ಕಿಸದೇ ಎಂಟು ಮಕ್ಕಳ ಜೀವ ಉಳಿಸುತ್ತಾನೆ..! ಈತನ ಸಾಹಸ ದೈರ್ಯಕ್ಕೆ ಸಂಜಯ್ ಚೋಪ್ರಾ ಅವಾರ್ಡ್ ಲಭಿಸಿದೆ. ಈತನ ಈ ಸಾಹಸ ಹಿಂದೊಮ್ಮೆ ಓದಿ ತಿಳಿದಿದ್ದೇ.. ಇವತ್ತೂ ಏನೋ ಹುಡುಕುತ್ತಿರುವಾಗ ಮತ್ತೆ ಈತನ ಮುಖದರ್ಶನವಾಯಿತು (ಫೋಟೋ ಸಿಕ್ಕಿತು) ಗೊತ್ತಿಲ್ಲದೇ ಇರೋರು ಈತನ ಬಗ್ಗೆ ಗೊತ್ತು ಮಾಡಿಕೊಳ್ಳಲಿ, ಗೊತ್ತಿರೋರು ಎಲ್ಲರಿಗೂ ಗೊತ್ತುಪಡಿಸುತ್ತೀರಿ ಎಂಬ ಆಶಯದೊಂದಿಗೆ ಈತನ ಸಾಹಸವನ್ನು ಇಲ್ಲಿ ನೆನಪು ಮಾಡಿಕೊಳ್ಳುತ್ತಿರುವೆ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕನಿಗೊಂದು ಸೆಲ್ಯೂಟ್..!

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...