ದೀಪವೊಂದು ಆರುವ ಮುನ್ನ ಇನ್ನೊಂದು ದೀಪವನ್ನು ಬೆಳಗಲೂಬಹುದು..! ಅದೇ ರೀತಿ ನಾವು ಕೂಡ ಬದುಕಿರುವಾಗ ಇನ್ನೊಬ್ಬರಿಗೆ ನಮ್ಮಿಂದ ಕೈಲಾದಷ್ಟು ಉಪಕಾರ ಮಾಡಿದರೆ.., ಅವರು ಕೊನೆತನಕ ನಮ್ಮನ್ನು ಮರೆಯಲಾರರು..! ಹಂಗಂತ ಪ್ರತಿಫಲಾಪೇಕ್ಷೆಯಿಂದ ಸಹಾಯ ಮಾಡ ಬಾರದು..! “ನೀವು ಯಾರದರೊಬ್ಬರ ಜೀವನವನ್ನು ಉಳಿಸಿದಿರೆಂದರೆ ಇಡೀ ಮಾನವೀಯತೆಯನ್ನೇ ಕಾಪಾಡಿದಂತೆ”..! ಬೇರೆಯವರನ್ನು ನೋಡಿ ನಗುವುದಲ್ಲ ಜೀವನ..! ನಗೆಪಾಟಲಿಗೆ ಒಳಗಾಗುವ ಆ ವ್ಯಕ್ತಿಯಲ್ಲಿಯೂ ನಾವೆಲ್ಲಾ ಕಲಿಯಲೇ ಬೇಕಾದ ಗುಣವೂ ಇರಬಹುದಲ್ಲವೇ..! ಪ್ರತಿದಿನ ಎಲ್ಲರಿಗಿಂತ, ಎಲ್ಲದ್ದಕ್ಕಿಂತ ವಿಭಿನ್ನವಾದ ಒಳ್ಳೆಯ ಕೆಲಸವನ್ನು ಮಾಡಿದರೆ, ಕೆಲವರು ನಮ್ಮನ್ನು ನೋಡಿ ನಗಬಹದು ಆದರೆ ಮುಂದೊಂದು ದಿನ ಅವರು ನಮ್ಮನ್ನೇ ಹಿಂಬಾಲಿಸುತ್ತಾರೆ..! ಈ ವಿಡಿಯೋ ನೋಡಿ, ಒಬ್ಬ ಶಿಕ್ಷಿತ ಹೋಟೆಲನ್ನಲ್ಲಿ ಬೇರೆಯವರು ಹಾಗೇ ಬಿಟ್ಟುಹೋಗಿದ್ದ ತಟ್ಟೆಯಲ್ಲಿದ್ದಿದ್ದನ್ನು ತನ್ನ ತಟ್ಟೆಗೆ ಹಾಕಿಕೊಂಡು ಸ್ವಲ್ಪ ಅದನ್ನೇ ತಿನ್ನುತ್ತಾನೆ..! ಆದ್ರೆ ಈತ ಕದ್ದು ಅಥವಾ ಪುಕ್ಕಟೆ ತಿಂದು ಹೋಗಲಿಲ್ಲ..! ಬದಲಾಗಿ ಕೈಲಾದ ಹಣವನ್ನು ಕ್ಯಾನ್ಸರ್ ರೋಗಿಗಳಿಗಾಗಿ ಇಟ್ಟಿದ್ದ ಹುಂಡಿ(ಡಬ್ಬ)ದಲ್ಲಿ ಹಾಕುತ್ತಾನೆ..! ಅವನು ಬೇರೆಯವರ ತಟ್ಟೆಯಿಂದ ತಿನಿಸು ತೆಗೆಯುವಾಗ ಮುಖಮುಖ ನೋಡಿ ವ್ಯಂಗ್ಯದ ನಗೆ ಬೀರಿದ್ದವರೇ ಇವನನ್ನು ಫಾಲೋ ಮಾಡ್ತಾರೆ..! ಈ ಸ್ಪೂರ್ತಿದಾಯಕ, ಮನ ಮುಟ್ಟುವ ವಿಡಿಯೋ ನೀವೇ ನೋಡಿ…
POPULAR STORIES :
ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!
ಸಿಹಿ ಚಹಾದ ಹಿಂದಿನ ಕಹಿ ಸತ್ಯ…!
ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!
ಜೀತದಾಳಾಗಿದ್ದವ ಇವತ್ತು ಡಾಕ್ಟರ್..!
ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..!
ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..
ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!
ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]