ಯುವಕನ ಸಾವಿಗೆ ಕಾರಣ ಆ ಪೊಲೀಸ್…?!

admin
0 Min Read

ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಈತನ ಸಾವಿಗೆ ಪೊಲೀಸ್ ಕಾರಣ ಎನ್ನಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ರಮೇಶ್ ತಳವಾರ್ (24) ಮೃತ. ಈತ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು.


ಕೆಲವು ದಿನಗಳ ಹಿಂದೆ ರಮೇಶ್ ತ್ರಿಬಲ್ ರೈಡಿಂಗ್ ಹೋಗಿದ್ದಕ್ಕೆ ಜೇವರ್ಗಿ ಠಾಣೆಯ ಮಲ್ಲು ಬಾಸಗಿ ಎಂಬ ಪೇದೆ ನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಅದಕ್ಕೇ ರಮೇಶ್ ಸಾವಿಗೆ ಶರಣಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

Share This Article
Leave a Comment