ಕಾವೇರಿ ನದಿ ಪ್ರದೇಶಗಳಲ್ಲಿ ಈ ಬಾರಿ ಮಳೆರಾಯ ಕೈಕೊಟ್ಟಿದ್ದಾನೆ. ಹವಾಮಾನ ಇಲಾಖೆ ಹೇಳೀದ ಭವಿಷ್ಯ ಅದ್ಯಾಕೋ ಸರಿ ಇಲ್ಲ ಅಂತ ಕಾಣ್ಸತ್ತೆ. ಆದ್ದರಿಂದ ಈ ಬಾರಿ ಸರಿಯಾದ ಮಳೆ ಬಾರದಿದ್ದ ಕಾರಣದಿಂದಾಗಿ ಅವಧಿಗೆ ಮುಂವಿತವಾಗಿಯೇ ಎಲ್ಲಾ ಅಣೆಕಟ್ಟುಗಳ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು, ಪ್ರಸ್ತತದ ಕೆಆರ್ಎಸ್ ಅಣೆಕಟ್ಟಿನ ನೀರಿನ ಮಟ್ಟ 90 ಅಡಿಗೆ ಬಂದು ನಿಂತಿದೆ. ಈ ವೇಳೆ ತಮಿಳುನಾಡು ಸರ್ಕಾರ ಕಾವೇರಿ ನದಿಯಿಂದ ನೀರು ಬಿಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿನ ರೈತರಿಗೆ ಆತಂಕ ಶುರುವಾಗಿದೆ.
ಕಳೆದ ಬಾರಿಯೂ ರಾಜ್ಯದಲ್ಲಿ ಸರಿಯಾದ ಮಳೆಯಿಲ್ಲದೇ ಯಾವುದೇ ಬೆಳೆಯಿಲ್ಲದೆ ರೈತರಲ್ಲಿ ಆತಂಕ ಶುರುವಾಗಿತ್ತು. ಇನ್ನುನ ಈಬಾರಿಯೂ ಅಣೆಕಟ್ಟುಗಳಲ್ಲಿ ನೀರಿನ ಅಭಾವ ಕಂಡುಕೊಂಡಿದ್ದು, ಇನ್ನು ತಮಿಳು ನಾಡಿಗೆ ನೀರು ಹರಿಸಲೇಬೇಕು ಎಂದು ಸುಪ್ರೀಂ ಆಜ್ಞೆ ನೀಡಿದ್ದು ಕಾವೇರಿ ನದಿ ನೀರಿನ ಸುತ್ತಮುತ್ತಲ ರೈತರ ಬದುಕು ಸಂಪೂರ್ಣವಾಗಿ ನೆಲ ಕಚ್ಚುವ ಸಂಭವವಿದೆ. ಪ್ರಸಕ್ತ ಸಾಲಿನಲ್ಲಿ ಮೊದಲಿಗೆ ಕೆಆರ್ಎಸ್ ನ ಒಳ ಹರಿವು ಹೆಚ್ಚಾದ ಕಾರಣದಿಂದಾಗಿ ರೈತರೆಲ್ಲರೂ ಭತ್ತದ ನಾಟಿ ಶುರು ಮಾಡಿದ್ದರು. ಆದರೆ ಕಳೆದ ಆ. 31ರಂದು ರಾಜ್ಯ ಸರ್ಕಾರ ಕೃಷಿಗೆ ನೀರು ಬಿಡಬೇಡಿ ಎಂದು ಹೇಳಿದ್ದರಿಂದ ರೈತರಿಗೆ ಮುಂದೇನು ಎಂಬ ಭೀತಿ ಕಾಡ್ತಾ ಇದೆ.
POPULAR STORIES :
ಜಿಯೋಗೆ ಪೈಪೋಟಿ ನೀಡಲು ಬಿಎಸ್ಎನ್ಎಲ್ ಭರ್ಜರಿ ಆಫರ್.!
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!