‘ಸತ್ತಳು’ ಬದುಕಿದಳು, ಮತ್ತೆ ಸತ್ತಳು ಬಾಲೆ….!

1
79

ತನ್ನ ಮಗಳು ಸತ್ತೆ ಹೋಗಿದ್ದಾಳೆ ಎಂದು ಚಟ್ಟ ರೆಡಿ ಮಾಡಿದ್ದ ಸಮಯದಲ್ಲಿ ಮನೆಯವರಿಗೊಂದು ಅಚ್ಚರಿ ಕಾದಿತ್ತು. ಆದೇನೆಂದರೆ ಮಗಳು ಸತ್ತಿದ್ದಾಳೆ ಎಂದು ಭಾವಿಸಿ ಚಟ್ಟಕ್ಕೆ ಇಟ್ಟ ಮೃತ ದೇಹದ ಕೈ ಕಾಲುಗಳು ಅಲುಗಾಡಲು ಆರಂಭಿಸಿತುಢಾಗಾದರೆ ನಿಜವಾಗಿಯೂ ಆ ಹುಡುಗಿಯ ಉಸಿರಾಟ ನಿಂತಿರಲಿಲ್ಲವೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಾ ಇದ್ರೆ, ಆದೇ ಸತ್ಯ. ಈ ಒಂದು ವಿಲಕ್ಷಣ ಘಟನೆ ನಡೆದಿದ್ದು ಅರಸಿಕೆರೆ ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ.
ವೈದ್ಯರ ನಿರ್ಲಕ್ಷದಿಂದ ಸತ್ತಳಾ? ಹಾಗಾದರೆ ಮತ್ತೆ ಹೇಗೆ ಬದುಕಿದಳು? ಮತ್ತೆ ಹೇಗೆ ಸತ್ತಳು ಎನ್ನುವ ಪ್ರಶ್ನೆ ನಿಮ್ನ ಕಾಡ್ತಿರಬಹುದು ಅಲ್ವೇ? ಇಲ್ಲೇ ಇರೋದು ನೋಡಿ ನಿಜವಾದ ಬಣ್ಣ. ಈಕೆ ವಿನುತಾ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದಳು, ಈಕೆಗೆ ಕಳೆದ ಕೆಲ ದಿನಗಳಿಂದ ಜ್ವರ ಶುರುವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಪೋಷಕರಿಗೆ ವೈದ್ಯರಿಂದ ಅಪಾಯಕಾರಿ ಸುದ್ದಿ ಕಾದಿತ್ತು. ಆ ಅಪಾಯಕಾರಿ ಸುದ್ದಿ ಏನು ಎಂದು ನಿಮ್ಮನ್ನು ಕಾಡುತ್ತಿರಬಹದು, ಅವಳು ಸತ್ತಿರಬಹುದೇ? ಇಲ್ಲವೇ ಮಿರಾಕಲ್ ಎನ್ನುವಂತೆ ಸೀರಿಯಸ್ ಆಗಿದ್ದವಳು ಆರಾಮಾಗಿ ಓಡಾಡಿಕೊಂಡಿರಬುಹುದೇ ಈಗೆ ಹಲವಾರು ಪ್ರಶ್ನೆ ನಿಮ್ಮ ತಲೆಯಲ್ಲಿ ಕಾಡುತ್ತಿರಬಹುದು ಅಲ್ಲವೇ? ನಿಮ್ಮ ಮೊದಲ ಊಹೆಯಂತೆ ಅಲ್ಲಿ ವಿನುತಾ ಸತ್ತಿದ್ದಳು. ಬಾಲೆಯನ್ನು ಕಾಪಾಡಿ ದೇವರ ಸ್ಥಾನದಲ್ಲಿ ನಿಲ್ಲಬೇಕಿದ್ದ ವೈದ್ಯರೇ, ವಿನುತಾಳ ಪಾಲಿಗೆ ಯಮಧೂತರಾದರು ಎಂದು ಪೋಷಕರು ಹೇಳುತ್ತಿದ್ದಾರೆ.
ಹಾಗಾದರೆ ನಿಜವಾಗಿಯೂ ನಡೆದಿದ್ದಾರು ಏನು ಎನ್ನುವುದೇ ಕುತೂಹಲಕಾರಿ ವಿಷಯ, ವಿನುತಾ ಮೃತ ಪಟ್ಟಿದ್ದಾಳೆ ಎಂದು ಧೃಢಿಕರಿಸಿದ ನಂತರ ಸ್ವಾಗ್ರಾಮಕ್ಕೆ ತಂದಿದ್ದಾರೆ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಟೈಮ್ ನಲ್ಲಿ ವಿನುತಾಳ ಕೈಕಾಲುಗಳನ್ನು ಅಲುಗಾಡಿಸಿದ ದೃಶ್ಯವನ್ನು ಕೆಲವರು ನೋಡಿದ್ದಾರೆ, ಆ ತಕ್ಷಣವೇ ಆಸ್ಪತ್ರೆಗೆ ಕರೆದೋಯ್ಯಲು ಮುಂದಾಗಿದ್ದಾರೆ, ಆದರೆ ಪೋಷಕರ ಪ್ರಯತ್ನ ವಿಫಲವಾಗಿತ್ತು. ಟೈಮ್ ಸಹ ಅವರ ಪಾಲಿಗೆ ಇರಲಿಲ್ಲ ವಿನುತ ಬದುಕಿ ಮತ್ತೆ ಸತ್ತಳು…….!

POPULAR  STORIES :

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

1 COMMENT

LEAVE A REPLY

Please enter your comment!
Please enter your name here