ನಶ್ವರ

Date:

ನಶ್ವರ

ಸರದಿಯಲಿ ಬಂದವನು
ಬಲುಬೇಗ ನಿಂತವನು
ಕಾಲುಸೋತವರ ಕಾಲೆಳೆದವನು
ಕರುಣೆ ಇಲ್ಲದ ಎದೆಯೊಳಗೆ
ಕರುಣಾನಟನಾದವನು
ಬೆತ್ತಲೆಯಲೂ ಹಸಿಸುಳ್ಳ ನುಡಿದವನು
ಹುಸಿ ನುಡಿಯ ಮಸಿ ಹಿಡಿದು
ತಿಳಿದಂತೆ ಬರೆದವನು
ಸರಸದಲೂ ವಿಷತಲೆಯ
ವಿಷಯವ ಬಿತ್ತುವನು
ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು
ಕಣ್ಣೀರ ಕಡಲಲ್ಲೂ ಹಗೆಯ
ಹೊಗೆಯಲಿ ಕೈಯ ಹಿಸುಕಿದವನ
ಕಂಡ ಕಾವ್ಯದತ್ತನ
ಮನವಿಂದು ನಗುತಿಹುದು
ಕಾಲ ಚಕ್ರದ ಸುಳಿಗೆ ಸಿಕ್ಕ
ಮೂಳೆಮಾಂಸವೇ ಮಣ್ಣಾಗಿಹುದೆಂದು
ನುಡಿದಿಹನು.

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ!

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ! ಬೆಂಗಳೂರು: ಡಿಜಿಪಿ...

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...