ನಶ್ವರ

Date:

ನಶ್ವರ

ಸರದಿಯಲಿ ಬಂದವನು
ಬಲುಬೇಗ ನಿಂತವನು
ಕಾಲುಸೋತವರ ಕಾಲೆಳೆದವನು
ಕರುಣೆ ಇಲ್ಲದ ಎದೆಯೊಳಗೆ
ಕರುಣಾನಟನಾದವನು
ಬೆತ್ತಲೆಯಲೂ ಹಸಿಸುಳ್ಳ ನುಡಿದವನು
ಹುಸಿ ನುಡಿಯ ಮಸಿ ಹಿಡಿದು
ತಿಳಿದಂತೆ ಬರೆದವನು
ಸರಸದಲೂ ವಿಷತಲೆಯ
ವಿಷಯವ ಬಿತ್ತುವನು
ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು
ಕಣ್ಣೀರ ಕಡಲಲ್ಲೂ ಹಗೆಯ
ಹೊಗೆಯಲಿ ಕೈಯ ಹಿಸುಕಿದವನ
ಕಂಡ ಕಾವ್ಯದತ್ತನ
ಮನವಿಂದು ನಗುತಿಹುದು
ಕಾಲ ಚಕ್ರದ ಸುಳಿಗೆ ಸಿಕ್ಕ
ಮೂಳೆಮಾಂಸವೇ ಮಣ್ಣಾಗಿಹುದೆಂದು
ನುಡಿದಿಹನು.

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...