ನಶ್ವರ

Date:

ನಶ್ವರ

ಸರದಿಯಲಿ ಬಂದವನು
ಬಲುಬೇಗ ನಿಂತವನು
ಕಾಲುಸೋತವರ ಕಾಲೆಳೆದವನು
ಕರುಣೆ ಇಲ್ಲದ ಎದೆಯೊಳಗೆ
ಕರುಣಾನಟನಾದವನು
ಬೆತ್ತಲೆಯಲೂ ಹಸಿಸುಳ್ಳ ನುಡಿದವನು
ಹುಸಿ ನುಡಿಯ ಮಸಿ ಹಿಡಿದು
ತಿಳಿದಂತೆ ಬರೆದವನು
ಸರಸದಲೂ ವಿಷತಲೆಯ
ವಿಷಯವ ಬಿತ್ತುವನು
ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು
ಕಣ್ಣೀರ ಕಡಲಲ್ಲೂ ಹಗೆಯ
ಹೊಗೆಯಲಿ ಕೈಯ ಹಿಸುಕಿದವನ
ಕಂಡ ಕಾವ್ಯದತ್ತನ
ಮನವಿಂದು ನಗುತಿಹುದು
ಕಾಲ ಚಕ್ರದ ಸುಳಿಗೆ ಸಿಕ್ಕ
ಮೂಳೆಮಾಂಸವೇ ಮಣ್ಣಾಗಿಹುದೆಂದು
ನುಡಿದಿಹನು.

?ದತ್ತರಾಜ್ ಪಡುಕೋಣೆ?

Share post:

Subscribe

spot_imgspot_img

Popular

More like this
Related

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...