ಹಗಲಿನಲ್ಲಿ ಹೋಮ, ಹವನ ಮಾಡುವಂತಿಲ್ಲ..!

admin
By admin
1 Min Read

 
ಬಿಹಾರದಲ್ಲಿ ಹೆಚ್ಚುತ್ತಿರುವ ಅಗ್ನಿ ಅವಗಢಗಳನನ್ನು ತಡೆಯೋ ನಿಟ್ಟಿನಲ್ಲಿ ಬಿಹಾರ ಸರ್ಕಾರ ಒಂದು ಅಪರೂಪದ ಆದೇಶ ಹೊರಡಿಸಿದೆ. ಅದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಯಾರೂ ಹೋಮ, ಹವನ, ಪೂಜೆ ಇತ್ಯಾದಿಗಳನ್ನು ನಡೆಸಬಾರದು. ಏನಿದ್ದರೂ ಬೆಳಗ್ಗೆ 9 ಗಂಟೆಗೆ ಮುನ್ನ ನಡೆಸಬೇಕು. ಜೊತೆಗೆ ಅಡುಗೆಯನ್ನು ಬೆಳಗ್ಗೆ 9ರ ಒಳಗೆ ಮಾಡಿಕೊಳ್ಳಬೇಕು. ಹೆಚ್ಚುತ್ತಿರೋ ಬಿಸಿಲಿನ ತಾಪಾವನ್ನು ಇಳಿಸೋದಕ್ಕೆ ಈ ರೀತಿಯ ಆದೇಶವನ್ನ ಬಿಹಾರ ಸಿಎಂ ನಿತೀಶ್ ಕುಮಾರ್ ಹೊರಡಿಸಿದ್ದಾರೆ.. ಆದೇಶವನ್ನು ಉಲ್ಲಂಘನೆ ಮಾಡಿದವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಆದೇಶವನ್ನು ಸರಕಾರ ಹೊರಡಿಸಿದೆ. ಆದ್ರೆ ಈ ಆದೇಶಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದ್ದಂತಾಗಿದೆ ಎಂದಿದ್ದಾರೆ. ಬಿಹಾರದಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳಿಂದ ಇಲ್ಲಿಯವರೆಗೆ 66 ಮಂದಿ ಅಸುನೀಗಿದ್ದು 1,200 ಪ್ರಾಣಿಗಳು ಮೃತಪಟ್ಟಿವೆ. ಬಿರುಬಿಸಿಲಿನಿಂದಾಗಿ ಅಗ್ನಿ ಅವಘಡಗಳು ಸಂಭವಿಸುವುದನ್ನು ತಪ್ಪಿಸಲು ಮುಖ್ಯಮಂತ್ರಿ ಈ ರೀತಿ ಆದೇಶವನ್ನ ಹೊರಡಿಸಿದ್ದಾರೆ. ಬೆಂಕಿ ಅವಘಡಗಳಿಗೆ ತುತ್ತಾಗಿರುವವರ ಕುಟುಂಬಗಳಿಗೆ ತತ್ ಕ್ಷಣ ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಅಗ್ನಿಶಾಮಕಗಳನ್ನು ಖರೀದಿಸಿ ಸೇವೆಗೆ ಒದಗಿಸುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

  • ರಘು ಕುಮಾರ್

POPULAR  STORIES :

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ಬಾಲಿವುಡ್ ಮಂದಿಯ ತಲೆ ಖಾಲಿಯಾಗಿದೆ..! ಅದು ಬಾಲಿವುಡ್ ಅಲ್ಲ, `ಖಾಲಿವುಡ್’

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

Share This Article