ನರೇಂದ್ರ ಮೋದಿಯವರು ತಾವು ಆಡಿದ್ದೇ ವೇದವಾಕ್ಯ ಎಂದು ಭ್ರಮಿಸುತ್ತಾರೆ. ಅಂತಹ ಭ್ರಮೆಗೆ ಕೇರಳದಲ್ಲಿ ಮಾರಣಾಂತಿಕ ಪೆಟ್ಟುಬಿದ್ದಿದೆ. ಕೇರಳದ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಬೇಳೆ ಬೇಯುವುದಿಲ್ಲ ಎಂದು ಗೊತ್ತಿದೆ. ಯಕಃಶ್ಚಿತ್ ಕಾಳುಕಡ್ಡಿಯನ್ನಾದರೂ ಬೇಯಿಸೋಣ ಎಂದು ನಿರ್ಧರಿಸಿರುವ ನರೇಂದ್ರ ಮೋದಿ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಭಾಷಣದ ಸಂದರ್ಭದಲ್ಲಿ ಸುಭಿಕ್ಷವಾಗಿರುವ, ದೇಶದಲ್ಲೇ ಮಾದರಿ ರಾಜ್ಯವೆನಿಸಿರುವ ಕೇರಳವನ್ನು ಅಪೌಷ್ಠಿಕತೆಯಿಂದ ನರಳುತ್ತಿರುವ ಸೊಮಾಲಿಯಾ ದೇಶಕ್ಕೆ ಹೋಲಿಸಿ ಅಭಾಸ ಮಾಡಿಕೊಂಡಿದ್ದಾರೆ. ತಾವು ಏನ್ ಮಾತಾಡ್ತಾ ಇದ್ದೀನಿ ಎಂಬ ಪರಿಜ್ಞಾನವಿಲ್ಲದಂತೆ ಭಾಷಣಬಿಗಿದ ಮೋದಿಗೆ ಕೇರಳದ ಜನರು ಛೀಮಾರಿ ಹಾಕುತ್ತಿದ್ದಾರೆ. ಮಲಯಾಳದಲ್ಲಿ `ಪೋ ಮೋನೆ ಮೋದಿ’ ಎಂಬ ಟ್ವಿಟ್ಟರ್ ಕ್ರಾಂತಿಯೇ ನಡೆದಿದೆ. ಇದು ಅಲ್ಲಿ ಬಿಜೆಪಿಗೆ ಬಹುದೊಡ್ಡ ಪೆಟ್ಟುಬೀಳುವ ಮುನ್ಸೂಚನೆ ಎನ್ನಲಾಗುತ್ತಿದೆ. ಬೇಕಿತ್ತಾ ಜನಪ್ರಿಯ ಪ್ರಧಾನಿಗೆ ಇದೆಲ್ಲಾ..!
- ರಾ ಚಿಂತನ್
POPULAR STORIES :
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
ಟೀಂ ಇಂಡಿಯಾ ಧೋನಿ ಕೈ ತಪ್ಪುತ್ತಾ…?
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
`ಹಿಂದೂ ಹೆಣ್ಣುಮಕ್ಕಳು ನಾಲ್ಕು ಮಕ್ಕಳನ್ನು ಹೆರಲಿ..!’ ಜೀನ್ಸ್ ಪ್ಯಾಂಟ್ ಮಹಾರಾಜನ ಫುಲ್ ಡಿಟೇಲ್ಸ್..!