ಪ್ರಧಾನಿ ನರೇಂದ್ರ ಮೋದಿ ಅವರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಇದರ ಕುರಿತಾದ ಸಾಕ್ಷಾಧಾರಗಳು ನನ್ನಲ್ಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿಕೆ ನೀಡಿದ್ದಾರೆ..! ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಬಳಿ ಸಾಕ್ಷಧಾರ ಇರೋದ್ರಿಂದಲೇ ಮೋದಿ ಅವರು ಮಾತನಾಡಲು ಹೆದರುತ್ತಾರೆ. ಸಂಸತ್ತಿನಲ್ಲಿ ಮಾತನಾಡುವುದು ನಮ್ಮ ಹಕ್ಕು. ಸಂಸತ್ನಲ್ಲಿ ಮಾತನಾಡಲು ಅನುಮತಿ ಕೊಡಿ ಎಂದು ಸ್ಪಿಕರ್ ಬಳಿ ಮನವಿ ಮಾಡಿಕೊಂಡರೂ ಕೂಡ ಅದಕ್ಕೆ ಆಸ್ಪದ ನೀಡ್ತಿಲ್ಲ ಎಂದು ಆರೋಪಿಸಿದ್ದಾರೆ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಸಂಸತ್ನಲ್ಲಿ ಮಾತನಾಡಲು ಬಿಡುತ್ತಿಲ್ಲ. ನೋಟು ನಿಷೇಧದ ಕುರಿತು ನಮಗೆ ಮಾತನಾಡಲು ಬಿಟ್ಟಿದ್ದೇ ಆದರೆ ಈ ಬಗ್ಗೆ ನಾನು ಮಾತನಾಡುತ್ತೇನೆ. ನಾನೇನಾದ್ರೂ ಮಾತನಾಡಲು ಆರಂಭಿಸಿದರೆ ಮೋದಿ ಅವರು ಸಂಸತ್ನಲ್ಲಿ ಕೂರಲು ಸಾಧ್ಯವಾಗೊಲ್ಲ. ದೇಶದೆಲ್ಲೆಡೆ ನೋಟು ನಿಷೇಧ ಮಾಡಿರೋದೆ ಒಂದು ದೊಡ್ಡ ಹಗರಣ ಎಂದಿರುವ ರಾಹುಲ್ ಗಾಂಧಿ ಇದರ ಎಲ್ಲಾ ಸಾಕ್ಷಾಧಾರಗಳು ನನ್ನಲ್ಲಿವೆ ಎಂದಿದ್ದಾರೆ. ಸಂಸತ್ನಲ್ಲಿ ನನಗೆ ಮಾತನಾಡಲು ಅವಕಾಶ ಕೊಡಿ, ಎಲ್ಲಾ ಸತ್ಯಾನು ಹೊರಗೆ ಹಾಕ್ತೀನಿ. ಕಳೆದ ಒಂದು ತಿಂಗಳಿನಿಂದಲೂ ಎಲ್ಲಾ ವಿರೋಧಪಕ್ಷಗಳು ಲೋಕ ಸಭೆಯಲ್ಲಿ ಚರ್ಚೆ ನಡೆಸುತ್ತಿವೆ. ಚರ್ಚೆಯಲ್ಲಿ ಪ್ರಧಾನಿ ಮೋದಿ ಅವರನ್ನು ಆಗಮಿಸಬೇಕು ಎಂದು ಆಗ್ರಹಿಸುತ್ತಿದೆ. ಆದರೆ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಚರ್ಚೆ ಬೇಡವಾಗಿದೆ..! ಎಂದು ಹೇಳಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ ನೋಟ್ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?
ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?
ಪ್ರಥಮ್ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?