ರಾತ್ರೋ ರಾತ್ರಿ ಮಂಡ್ಯದಲ್ಲಿ ಮನೆ ಖಾಲಿ ಮಾಡಿದ ರಮ್ಯಾ..! ಅಭಿಮಾನಿಗಳ ಆಕ್ರೋಶಕ್ಕೆ ಮಣಿದುಬಿಟ್ರಾ ಮೋಹಕ ನಟಿ..!!?

Date:

ರಮ್ಯಾ ನಡೆ ಬಗ್ಗೆ ಈ ಎಲ್ಲೆಡೆ ಚರ್ಚೆಯಾಗುತ್ತಿದೆ.. ಯಾಕೆ ಹೀಗೆ ಮಾಡುತ್ತಿದ್ದಾರೆ ಈ ಮೋಹಕ ತಾರೆ ಅನ್ನೋ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.. ಹೇಳಿಕೇಳಿ ಮಂಡ್ಯ ಸೇರಿದಂತೆ ರೆಬಲ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಟಿ-ಮಾಜಿ ಸಂಸದೆ, ಈಗ ಇದ್ದಕ್ಕೆ ಇದ್ದಹಾಗೆ ರಾತ್ರೋರಾತ್ರಿ ಮನೆ ಖಾಲಿ ಮಾಡುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ..ಕಳೆದ ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲೇ ಇದ್ದು ಪ್ರಚಾರ ಕಾರ್ಯ ನಡೆಸಲು ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ರು.. ನಿನ್ನೆ ತಡ ರಾತ್ರಿ ಎರಡು ಲಾರಿಗಳಲ್ಲಿ ಮನೆಯ ಸಾಮಾಗ್ರಿಗಳನ್ನ ಖಾಲಿ ಮಾಡಿಬಿಟ್ಟಿದ್ದಾರೆ.. ಹೀಗೆ ಧಿಡೀರನೆ ಮನೆ ಖಾಲಿ ಮಾಡಿರುವುದು ತೀರ್ವ ಚರ್ಚೆಗೆ ಕಾರಣವಾಗಿದೆ.. ಎರಡನೆ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ರಮ್ಯಾ ಸೋಲು ಕಂಡಿದ್ರು.. ಆಗ ನನ್ನ ಸೋಲಿಗೆ ಅಂಬಿ ಅವರ ಬೆಂಬಲ ಸಿಗದಿದದ್ದೆ ಕಾರಣ ಅಂತ ಹೇಳಿಕೊಂಡಿದ್ರು… ಆನಂತರ ಈ ಇಬ್ಬರ ನಡುವೆ ಅಂತ ಮೂಡಿತ್ತು…ಇದೆಲ್ಲವನ್ನು ಪಕ್ಕಕ್ಕಿಟ್ಟು ರಮ್ಯಾ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಲ್ಲಿದ್ದಾರೆ ಎಂದುಕೊಂಡ್ರು.. ಸಂತಾಪ ಕೇವಲ ಟ್ವೀಟ್ ನಲ್ಲೆ ಮುಗಿದು ಹೋಯಿತು.. ಈ ಎಲ್ಲದರಿಂದ ಕೋಪಗೊಂಡಿದ್ದ ಅಭಿಮಾನಿಗಳು ರಮ್ಯಾ ವಿರುದ್ದ ಆಕ್ರೋಶವನ್ನ ವ್ಯಕ್ತ ಪಡೆಸಿದ್ರು..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...