ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

Date:

ಬಾಲಿವುಡ್ ನಲ್ಲಿ ಲಿಪ್ ಲಾಕ್ ಸೀನ್ ಗಳ ಟ್ರೆಂಡ್ ಕ್ರಿಯೇಟ್ ಆಗಿದೆ. ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆಗ್ತಿರೋ ಎಲ್ಲಾ ಚಿತ್ರಗಳಲ್ಲೂ ಇಂತದ್ದೊಂದು ಸೀನ್ ಗ್ಯಾರಂಟಿ ಅನ್ನೋ ಹಾಗೆ ಆಗೋಗಿದೆ. ಇದಕ್ಕೆ ಕರಣ್‌ ಜೋಹರ್‌ ನಿರ್ದೇಶನದ ಯೇ ದಿಲ್ ಹೈ ಮುಶ್ಕಿಲ್ ಚಿತ್ರ ಕೂಡ ಹೊರತಾಗಿಲ್ಲ. ಇಂತಹ ಒಂದು ದೃಶ್ಯದಲ್ಲಿ ನಾಯಕ ರಣಬೀರ್‌ ಕಪೂರ್‌ ಮತ್ತು ನಾಯಕಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕಾಣಿಸಿಕೊಳ್ಳಬೇಕಿತ್ತು. ಮೊದಮೊದಲು ಇದಕ್ಕೆಲ್ಲ ಓಕೆ ಅಂದಿದ್ದ ಐಶ್‌ ಈಗ ಅದ್ಯಾಕೋ ಆಗೋದೆ ಇಲ್ಲಾ, ನೋ ಛಾನ್ಸ್ ಅಂತಿದ್ದಾರಂತೆ.

ಬಚ್ಚನ್ ಸೊಸೆಯ ಈ ನಿರ್ಧಾರದಿಂದ ಸಿಕ್ಕಾಪಟ್ಟೆ ಡಿಸಪಾಯಿಂಟ್ ಆಗಿರೋ ರೊಮ್ಯಾಂಟಿಕ್ ನಿರ್ದೇಶಕ ಕರಣ್‌ ಜೋಹರ್‌ ಸಕತ್ತಾಗಿರೋ ಉಪಾಯವನ್ನೇ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಲಿಪ್ ಲಾಕ್ ಮಾಡ್ದೆ ಹೋದ್ರೆ ಏನಂತೆ ಒಬ್ಬರಿಗೊಬ್ಬರು ರೋಮ್ಯಾಂಟಿಕ್‌ ಆಗಿ ಚಾಕ್‌ಲೇಟ್‌ ತಿನ್ನುವ ದೃಶ್ಯವನ್ನ ಕ್ರಿಯೇಟ್‌ ಮಾಡಿದರಂತೆ. ಅದಕ್ಕೆ ಹೇಳೋದು ಕ್ರಿಯೇಟಿವಿಟಿ ಅನ್ನೋದು ಇದ್ರೆ ಯಾವ ಸೀನ್ ಅನ್ನ ಹೇಗ್ ಬೇಕಾದ್ರು ತೋರಿಸಬಹುದು ಅಂತ.

ಆದ್ರೆ ಮೊದಮೊದಲು ಲಿಪ್ ಲಾಕ್ ಗೆ ಒಪ್ಪಿದ್ದ ಐಶ್ ಈಗ ನೋ ಅಂತ ಹೇಳ್ತಿರೋದ್ಯಾಕೆ. ಹಾಗೆ ನೋಡಿದ್ರೆ ಲಿಪ್ ಲಾಕ್ ಸೀನ್ ಗಳಲ್ಲಿ ಈ ಮೊದಲು ಐಶ್ ಕಾಣಿಸಿಕೊಂಡಿದ್ದಾರೆ. ಹಸಿ ಬಿಸಿ ದೃಶ್ಯಗಳಲ್ಲು ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಆದ್ರೆ ಈಗ ಐಸು ಮೇಡಂ ರಣಬೀರ್ ಜೊತೆ ಲಿಪ್ ಲಾಕ್ ಗೆ ನೋ ಅಂದಿದ್ದಕ್ಕೂ ಮೊನ್ನೆ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಬಚ್ಚನ್ ಐಶ್ ಬೇಬಿ ಮೇಲೆ ಗುರ್ರ್ ಅಂದಿದ್ದಕ್ಕೆ ಏನಾದ್ರು ಕನೆಕ್ಷನ್ ಇದ್ಯಾ ಅಂತ…?

https://youtu.be/jMBujfwzhWs?t=1m9s

  • ಶ್ರೀ

POPULAR  STORIES :

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...