ಕಳ್ಳರು ಮನೆಗೆ ನುಗ್ಗಿ ಅಥವಾ ಪಿಕ್ ಪಾಕೆಟ್ ಮಾಡಿ ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಖತರ್ನಾಕ್ ಕಳ್ಳರು ಉದ್ಯಮಿಯ ಗಮನವನ್ನ ಬೇರೆಡೆಗೆ ಸೆಳೆದು ಹಣ ದೊಚಿದ್ಧಾರೆ. ಸುಂಕದ ಕಟ್ಟೆಯ ನಿವಾಸಿ ಪ್ರಸಾದ್ ಕುಮಾರ್ 3.5 ಲಕ್ಷ ಹಣ ಕಳೆದು ಕೊಂಡ ಉದ್ಯಮಿ. ಸುಂಕದಕಟ್ಟೆಯ ವಿಜಯಾಬ್ಯಾಂಕ್ ಶಾಖೆಯಲ್ಲಿ ಕುಮಾರ್ ಮದ್ಯಾಹ್ನ 3.5 ಲಕ್ಷ ಹಣವನ್ನ ಡ್ರಾ ಮಾಡಿದ್ದಾರೆ. ನಂತರ ಹೊರ ಬಂದ ಉದ್ಯಮಿಯನ್ನ ಗಮನಿಸುತ್ತಿದ್ದ ದುಷ್ಕರ್ಮಿಗಳು 10 ರೂಪಾಯಿಯನ್ನು ರಸ್ತೆ ಮೇಲೆ ಎಸೆದು ಉದ್ಯಮಿಯ ಗಮನವನ್ನ ಅದರತ್ತ ಸೆಳೆದಿದ್ದಾರೆ. ಇದನ್ನ ತಿಳಿಯದೇ ಕುಮಾರ್ ಬ್ಯಾಗ್ ನ್ನು ಬೈಕ್ ಮೇಲೆ ಇರಿಸಿ ಹಣ ಎತ್ತಿ ಕೊಳ್ಳಲು . ಮುಂದಾದಾಗ ದುಷ್ಕರ್ಮಿಗಳು ಬ್ಯಾಗನ್ನ ಕಳವು ಮಾಡಿದ್ದಾರೆ. ಉದ್ಯಮಿ ಸ್ವತಃ ಕಾರ್ಖಾನೆ ಹೊಂದಿದ್ದು ಅದಕ್ಕೆ ಸಾಮಾಗ್ರಿಗಳನ್ನು ತರಲು ಹಣ ಡ್ರಾ ಮಾಡಿದ್ದರು. ಕುಮಾರ್ ಸುಂಕದಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!