ಸಲ್ಮಾನ್ ಗೆ ಜೈಲಿನ ದಾರಿ ತೋರಿಸಿದ ಬಿಷ್ಣೋಯಿ ಸಮುದಾಯದ ಬಗ್ಗೆ ನಿಮಗೆಷ್ಟು ಗೊತ್ತು….?

Date:

20ವರ್ಷಗಳ ಹಿಂದೆ ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲು ಸೇರಿದ್ದಾರೆ. ಇವರಿಗೆ ಜೈಲಿನ ದಾರಿತೋರಿಸಿದ ಬಿಷ್ಣೋಯಿ ಸಮುದಾಯದ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ?
ಹೌದು , ಸಲ್ಮಾನ್ ಅವರು ಜೈಲು ಪಾಲಾಗಲು ಕಾರಣ ಬಿಷ್ಣೋಯಿ ಸಮುದಾಯದವರು.


ಸಲ್ಮಾನ್ 1998 ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಶೂಟಿಂಗ್ ವೇಳೆ ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣಮೃಗಳನ್ನು ಸಲ್ಮಾನ್ ಬೇಟೆಯಾಡಿದ್ದರು.
ಕೃಷ್ಣಮೃಗಗಳನ್ನು ಪೂಜ್ಯನೀಯ ಎಂದು ಕಾಣುವ ಬಿಷ್ಣೋಯಿ ಸಮುದಾಯ ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ಸಲ್ಮಾನ್ ಗೆ ಶಿಕ್ಷೆ ಆಗಲೇ ಬೇಕು ಎಂದು ಕಾನೂನು ಹೋರಾಟ ಮಾಡಿದ್ದರು.


ರಾಜಸ್ಥಾನದಲ್ಲಿ ನೆಲೆಸಿರುವ ಈ ಸಮುದಾಯದವರು ವಿಷ್ಣುವಿನ ಆರಾಧಕರು. ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಈ ಸಮುದಾಯಕ್ಕೆ 6ಶತಮಾನಗಳ ಇತಿಹಾಸವಿದೆ. 15ನೇ ಶತಮಾನದಲ್ಲಿದ್ದ ಗುರು ಜಂಬೇಶ್ವರ ಈ ಸಮುದಾಯವನ್ನು ಸ್ಥಾಪಿಸಿದ್ರು. ಬಿಷ್ಣೋಯಿ ಎಂದರೆ ರಾಜಸ್ಥಾನಿಯಲ್ಲಿ 29 ಎಂದರ್ಥ. ಗುರು ಜಂಬೇಶ್ವರನ 29 ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುವವರು ಬಿಷ್ಣೋಯಿಗಳು.
ಕೃಷ್ಣಮೃಗಗಳು ಗುರು ಜಂಬೇಶ್ವರನ ಪುನರ್ಜನ್ಮದ ರೂಪ ಎಂದು ಈ ಸಮಯದಾಯವರು ನಂಬಿದ್ದಾರೆ. ಗುರುಗಳ ಹೆಸರಲ್ಲಿ ಕೃಷ್ಣಮೃಗಗಳನ್ನು ಮತ್ತು ಚಿಂಕಾರಗಳನ್ನು ರಕ್ಷಿಸುತ್ತಾ ಬಂದಿದ್ದಾರೆ.


ಹೀಗಿರುವಾಗ ಸಲ್ಮಾನ್ ಖಾನ್ ಕೃಷ್ಣಮೃಗಗಳನ್ನು ಬೇಟಿಯಾಡಿದ್ದು ಇವರಿಗೆ ಅತೀವ ಬೇಸರ ತರಿಸಿತ್ತು. ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಅಪರಾಧಿಗೆ ಶಿಕ್ಷೆ ಆಗಿರುವುದರಿಂದ ಸಮುದಾಯಕ್ಕೆ ಖುಷಿಯಾಗಿದೆ.

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...