ಪ್ರೀತಿ ಮದುವೆಯಾಗಿ ಗರ್ಭಿಣಿಯಾದ ಮೇಲೆ ವಿಷ ನೀಡಿ ಕೊಂದ ….! ಕಾರಣ…?

Date:

ತವರು ಮನೆಯರು ಆಸ್ತಿ ನೀಡಿಲ್ಲ ಎಂದು ಪತಿ ತನ್ನ ಗರ್ಭಿಣಿ ಹೆಂಡ್ತಿಗೆ ವಿಷ ನೀಡಿ ಕೊಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ‌.
ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದ ರಾಜಪ್ಪ ಅವರ ಮಗಳು ನಳಿನಾ‌ ಮೃತ ದುರ್ದೈವಿ.


ಇಂಜಿನಿಯರಿಂಗ್ ಪದವೀಧರೆ ಆಗಿರುವ ನಳಿನಾ ಅವರನ್ನು ಚೇತನ್ ಎಂಬಾತ ಪ್ರೀತಿಸಿ ಕಳೆದ ಏಪ್ರಿಲ್ ನಲ್ಲಿ ಮೈಸೂರಿಗೆ‌ ಕರೆದುಕೊಂಡು ಹೋಗಿ ಮದ್ವೆ ಆಗಿದ್ದ. ಬಳಿಕ ವರದಕ್ಷಿಣಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ‌.

ಕೊನೆಗೆ ನಳಿನಾ ಮನೆಯವರು ಪಾಲುಕೊಟ್ಟು ಜಂಟಿ ಖಾತೆ ಮಾಡಿದ್ರು. ಆದರೆ, ಎಲ್ಲಾ ಆಸ್ತಿ ತನ್ನ ಹೆಸರಿಗೇ ಬೇಕು, ಮಾರಾಟ ಮಾಡಬೇಕು ಎಂದು ಚೇತನ್ ಒತ್ತಾಯಿಸುತ್ತಿದ್ದನಂತೆ. ಇದಕ್ಕೆ ಒಪ್ಪದಾಗ ತಾಯಿ ಮತ್ತು ಅಜ್ಜನ ಜೊತೆ ಸೇರಿ ನಳಿನಾ ಅವರಿಗೆ ಬಲವಂತವಾಗಿ ವಿಷ ಕುಡಿಸಿ , ಸಾಯಿಸಿದ್ದಾನೆ.‌ ನಳಿನಾ 7ತಿಂಗಳ ಗರ್ಭಿಣಿಯಾಗಿದ್ದರು. ಮಗು ಕೂಡ ಸಾವನ್ನಪ್ಪಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು?!

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು ಎಂಬ ನಂಬಿಕೆ ಅನೇಕ...

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್...

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ...