ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..! ಇಲ್ಲಿದೆ ಬಿಹಾರ್ ಕ್ಯಾಬಿನೆಟ್ ಸಚಿವರು ಮತ್ತು ಅವರ ಶೈಕ್ಷಣಿಕ ಅರ್ಹತೆ..!

Date:

ಜೀವನದಲ್ಲಿ ಶಿಕ್ಷಣವೇ ಎಲ್ಲವೂ ಅಲ್ಲ..! ಅದರಲ್ಲೂ ರಾಜಕಾರಣಕ್ಕೆ ಯಾವ ವಿದ್ಯಾರ್ಹತೆಯೂ ಬೇಕಾಗಿಲ್ಲ..! ಬಿಹಾರದ ಹೊಸ ಸಚಿವ ಸಂಪುಟವನ್ನು ನೋಡಿದ್ರೆ ಅದು ಪಕ್ಕಾ ಅನಿಸಿಬಿಡುತ್ತೆ..! 9ನೇ ಕ್ಲಾಸ್ ಫೇಲ್ ಆದವರು, ಐಪಿಎಲ್ ನಲ್ಲಿ ಬೆಂಚ್ ಬಿಸಿ ಮಾಡಿದವರು ಇವತ್ತು ಬಿಹಾರ್ ನ ಉಪಮುಖ್ಯಮಂತ್ರಿಗಳು..! ಶಿಕ್ಷಣ ಸಚಿವರು ಓದಿರೋದು ಎಸ್ಎಸ್ಎಲ್ಸಿ..! ರಾಜಕಾರಣಕ್ಕೆ ಯಾವ ವಿದ್ಯಾರ್ಹತೆಯೂ ಬೇಕಾಗಿಲ್ಲ…! ಅಲ್ವಾ..?!

ಇಲ್ಲಿ, ಬಿಹಾರ ಕ್ಯಾಬಿನೆಟ್ ನ ಮಂತ್ರಿಗಳು ಮತ್ತು ಅವರ ವಿದ್ಯಾರ್ಹತೆ ಬಗ್ಗೆ ಮಾಹಿತಿ ಇಲ್ಲಿದೆ.

1. ನಿತೀಶ್ ಕುಮಾರ್ _ ಮುಖ್ಯಂತ್ರಿಗಳು, ಸಾಮಾನ್ಯ ಆಡಳಿತ, ಗೃಹ, ಮತ್ತು ಮಾಹಿತಿ, ಸಾರ್ವಜನಿಕ. ಇವರು ಬಿಇ (ಬ್ಯಾಚ್ಯುಲರ್ ಆಫ್ ಇಂಜಿನಿಯರಿಂಗ್ ಪದವಿಧರರು..!

2. ತೇಜಸ್ವಿ ಯಾದವ್ : ಉಪ ಮುಖ್ಯಮಂತ್ರಿಗಳು, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.. ಇವರು ಒಂಬತ್ತನೇ ತರಗತಿ ಫೇಲ್ ಆದವರು..!

3. ತೇಜ್ ಪ್ರತಾಪ್ ಯಾದವ್ : ಆರೋಗ್ಯ, ಸಣ್ಣ ನೀರಾವರಿ, ಪರಿಸರ ಸಚಿವರು. ಇವರ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಫೇಲ್ ಆದವರು..!

4. ಅಬ್ದುಲ್ ಬರಿ ಸಿದ್ದಿಕ್ : ಹಣಕಾಸು ಸಚಿವರು. ಇವರು ದ್ವಿತೀಯ ಪಿಯುಸಿ ಮುಗಿಸಿದವರು..!

5. ವಿಜೇಂದ್ರ ಪ್ರಸಾದ್ ಯಾದವ್ : ಇಂಧನ ಸಚಿವರು. ಇವರದ್ದು ಎಸ್ಎಸ್ಎಲ್ಸಿ ವಿದ್ಯಾರ್ಹತೆ..!

6. ಲಾಲನ್ ಸಿಂಗ್ : ಜಲ ಸಂಪನ್ಮೂಲ ಸಚಿವರು. ಇವರು ಓದಿದ್ದು ಎಂಟನೇ ತರಗತಿವರೆಗೆ..!

7. ಮಂಜು ವಮರ್ಾ : ಸಮಾಜ ಕಲ್ಯಾಣ ಸಚಿವರು. ಇವರು ದ್ವಿತೀಯ ಪಿಯುಸಿ ಓದಿದ್ದಾರೆ..!

8. ಮದನ್ ಮೋಹನ್ ಝಾ : ಕಂದಾಯ ಮತ್ತು ಭೂ ಸುಧಾರಣೆ. ಏಳನೇ ತರಗತಿ ತನಕ ಓದಿದ್ದಾರೆ.

9. ಮದನ್ ಸಾಹ್ನಿ : ಆಹಾರ ಪೂರೈಕೆ ಸಚಿವರು. ಇವರ ವಿದ್ಯಾರ್ಹತೆ ಎಸ್ಎಸ್ಎಲ್ಸಿ..!

10. ಅಶೋಕ್ ಚೌದರಿ : ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. ಇವರೂ ಕೂಡ ಎಸ್ಎಸ್ಎಲ್ಸಿ ಓದಿದ್ದಾರೆ..!

11. ವಿಜಯ್ ಪ್ರಕಾಶ್ : ಕಾರ್ಮಿಕ ಸಂಪನ್ಮೂಲ ಸಚಿವರು. ಇವರು ಐದನೇ ಕ್ಲಾಸ್ ಓದಿದ್ದಾರೆ..!

12. ರಾಮ್ ವಿಚಾರ್ ರೇ : ಕೃಷಿ ಸಚಿವರು. ಪದವಿಧರರು.

13. ಕಪಿದೇವ್ ಕಾಮತ್ : ಪಂಚಾಯಿತಿ ನಿಯಮ. ಇವರು ಓದಿದ್ದು 3ನೇ ಕ್ಲಾಸ್..!

14. ಸಂತೋಷ ನಿರಾಲ : ಪ.ಜಾತಿ, ಪ. ಪಂಗಡದ ಕಲ್ಯಾಣ. ದ್ವಿತೀಯ ಪಿಯು ಓದಿದ್ದಾರೆ.

15. ಅಬ್ದುಲ್ ಜಲೀಲ್ ಮಸ್ತನ್ : ಉತ್ಪನ್ನ. ಇವರ ವಿದ್ಯಾರ್ಹತೆ 8ನೇ ತರಗತಿ ಪಾಸ್..!

16. ಅಬ್ದುಲ್ ಗಾಫರ್ : ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಇವರ ವಿದ್ಯಾರ್ಹತೆ ಎಸ್ಎಸ್ಎಲ್ಸಿ..!

17. ಚಂದ್ರಿಕಾ ರಾಯ್ : ಸಾರಿಗೆ ಸಚಿವರು. ಇವರು ಸ್ನಾತಕೋತ್ತರ ಪದವಿಧರೆ..!

18. ಮಹೇಶ್ವರ್ ಹಜಾರಿ : ಮುನ್ಸಿಪಲ್ ಅಭಿವೃದ್ಧಿ ಸಚಿವರಾದ ಇವರು ಓದಿದ್ದು ದ್ವಿತೀಯ ಪಿಯುಸಿ..!

19 ಚಂದ್ರಶೇಖರ್ : ವಿಪ್ಪತ್ತು ನಿರ್ವಹಣಾ ಸಚಿವರಾದ ಇವರು ಓದಿದ್ದು ನಾಲ್ಕನೇ ತರಗತಿ..!

20. ಜಯಕುಮಾರ್ ಸಿಂಗ್ : ಕೈಗಾರಿಕೆ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು..! ಇವರು ಓದಿದ್ದು ಎಸ್ಎಸ್ಎಲ್ಸಿ..!

21. ಅನಿತಾ ದೇವಿ : ಪ್ರವಾಸ ಸಚಿವರು. ಇವರು ದ್ವಿತೀಯ ಪಿಯುಸಿ ಓದುತ್ತಿದ್ದಾರೆ..!

22. ಅವ್ದೇಶ್ ಸಿಂಗ್ : ಐದನೇ ತರಗತಿ ಓದಿರೋ ಇವರು ಪಶುಪಾಲನ ಸಚಿವರು..!

23. ಮುನೇಶ್ವರ್ ಚೌದರಿ : ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಇವರು ಓದಿದ್ದು ದ್ವಿತೀಯ ಪಿಯುಸಿ..!

24. ಕೃಷ್ಣ ನಂದನ್ ವರ್ಮಾ : ಪಿಎಚ್ಡಿ ಮತ್ತು ಕಾನೂನು ಸಚಿವಾರದ ಇವರ ವಿದ್ಯಾರ್ಹತೆ ಮಾತ್ರ ಪ್ರಥಮ ಪಿಯುಸಿ..!

25. ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್ : ಕಬ್ಬು ಉದ್ಯಮ ಸಚಿವರಾಗಿರೋ ಇವರು ಐದನೇ ತರಗತಿ ಓದಿದ್ದಾರೆ..!

26. ಶೈಲೇಶ್ ಕುಮಾರ್ : ಗ್ರಾಮೀಣ ವ್ಯವಹಾರಗಳ ಸಚಿವರಾದ ಇವರು ಸ್ನಾತಕೋತ್ತರ ಪದವಿಧರರು.

27. ಅಲೋಕ್ ಮೇಹ್ತಾ : ಪದವಿಪೂರ್ವ ಶಿಕ್ಷಣ ಪಡದಿರೋ ಇವರು ಸಹಕಾರ ಸಚಿವರು..!

28. ಸರ್ವಣಾ ಕುಮಾರ್ : ಗ್ರಾಮೀಣ ಅಭಿವೃದ್ಧಿ ಸಚಿವರಾದ ಇವರು ದ್ವಿತೀಯ ಪಿಯುಸಿ ಓದಿದ್ದಾರೆ..!

29. ಶಿವಚಂದನ್ ರಾಮ್ : ಕಲೆ ಸಂಸ್ಕೃತಿ ಸಚಿವರಾದ ಇವರು ಅಶಿಕ್ಷಿತರು..!

ನೋಡಿ, ಇದನ್ನೆಲ್ಲಾ ನೋಡ್ತಾ ಇದ್ರೆ ಜೀವನದಲ್ಲಿ ಶಿಕ್ಷಣವೇ ಮುಖ್ಯವಲ್ಲ ಅಂತ ಅನಿಸುತ್ತೆ ಅಲ್ವೇ..?!

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...