‘ವಿಷ ಕುಡ್ಸಿ ಸಾಯಿಸಿ ಬಿಡು’ ಎಂದು ಪ್ರೇಮ್ ಗೆ ಹೇಳಿದವರಾರು?

admin
By admin
1 Min Read

ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಮೇಲಿನ ನಿರೀಕ್ಷೆ ಹೆಚ್ಚಿದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗಾಗಲೇ ಶೂಟಿಂಗ್ ಮುಗಿಸಿ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಾರೆ.
ಚಿತ್ರದ ಒಂದೇ ಒಂದು ತುಣಕ್ಕನ್ನು ಬಿಡುಗಡೆಗೆ ಅಭಿಮಾನಿಗಳು ಕಾಯ್ತಿದ್ದಾರೆ.


ತಾಳ್ಮೆ‌ಕಳೆದುಕೊಂಡಿರುವ ಅಭಿಮಾನಿಯೊಬ್ಬರು, ‘ ಗುರೂ…ಒಂದು ತೊಟ್ಟು ವಿಷ ಕುಡ್ಸಿ ಸಾಯಿಸಿ ಬಿಡು ನಮ್ನ’ ಎಂದು ಪ್ರೇಮ್ ಗೆ ಹೇಳಿದ್ದಾರೆ…!
ದಿ ವಿಲನ್ ಸಿನಿಮಾದ ಟೀಸರ್ ರಿಲೀಸ್ ಮಾಡಿಲ್ಲ‌, ಸಿನಿಮಾದ ಬಗ್ಗೆ ಏನನ್ನೂ ಹೇಳದಿರುವುದೇ ಅಭಿಮಾನಿಯ ಈ‌ ಮಾತಿಗೆ ಕಾರಣ.
ನಿನ್ನೆ ಪ್ರೇಮ್ ತಮ್ಮ‌ ಮಗ ಸೂರ್ಯ ಅಮ್ಮಂದಿರ ದಿನಕ್ಕೆ ವಿಶ್ ಮಾಡಲು ರಿಲೀಸ್ ಮಾಡಿದ್ದ ಪೇಂಟಿಂಗ್ ನ ಶೇರ್ ಮಾಡಿದ್ದರು. ಟ್ವೀಟರ್ ನಲ್ಲಿ ಶೇರ್ ಮಾಡಿದ್ದ ಈ ಪೋಸ್ಟ್ ಗೆ ಅಭಿಮಾನಿಗಳು ದಿ‌ ವಿಲನ್ ಸಿನಿಮಾ ಟೀಸರ್ ಬಗ್ಗೆ ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ.
ಅಂತಹ ಕೆಲವು ರೀ ಟ್ಯೂಟ್, ಕಾಮೆಂಟ್ ಗಳು ಇಲ್ಲಿವೆ.

https://twitter.com/directorprems/status/995198243553214464

Share This Article