ಅತೀ ಶೀಘ್ರದಲ್ಲಿ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ ಅಂಗವಾಗಿ ಟಿ-ಶರ್ಟ್ ಹಾಗೂ ಟ್ರೋಫಿ ಅನಾವರಣವನ್ನ ಮಾಡಲಾಯಿತು.

ಈ ಕಾರ್ಯಕ್ರಮ ಮುದ್ದಾಯನಪಾಳ್ಯದಲ್ಲಿರುವ ಅಸ್ಥಿತ್ವ ದಿ ವೆನ್ಯೂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರೂಪಾ ಎಂಟರ್ಫೈಸಸ್ ವತಿಯಿಂದ, ವಿಶೇಷ ಕ್ರೀಡಾ ಟೂರ್ನಮೆಂಟ್ನಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಕ್ರೀಡಾಅಭಿಮಾನಿಗಳ ಉತ್ಸಾಹಕ್ಕೆ ತಾರಾ ಬಳಗ ಸೇರಿರುವುದು ಮತ್ತಷ್ಟು ಖುಷಿ ನೀಡಿದೆ.

ಇನ್ನೂ ಟೂರ್ನಮೆಂಟ್ ಡೈರೆಕ್ಟರ್ ಕೆ.ಎಂ. #ನಟರಾಜ್, ಟೂರ್ನಮೆಂಟ್ ಫೌಂಡರ್ ರೂಪಾಗೌಡ ಹಾಗೂ ಟೂರ್ನಮೆಂಟ್ ಸಿಇಒ ಕಿರಣ್ ಗೌಡ ಅವರ ನೇತೃತ್ವದಲ್ಲಿ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ನಾಗಲಕ್ಷ್ಮಿ ಚೌದರಿ- ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ, ದಿ ನ್ಯೂಇಂಡಿಯನ್ ಸಂಸ್ಥೆ ಹಾಗೂ ಲಕ್ಷ್ಮೀ ಗಣೇಶ ಪ್ರೋಡೆಕ್ಷನ್ ನ ಸಿಇಓ ಹಾಗೂ ನಿರ್ಮಾಪಕ ಆಗಿರುವ ರಘ ಭಟ್, ನಟ, ನಿರ್ಮಾಪಕ,ಹಾಗೂ ಭಾರತ ಸಾರಥಿ ಕನ್ನಡ ದಿನಪತ್ರಿಕೆಯ ಸಂಪಾದಕ ಗಂಡಸಿ ಸದಾನಂದಸ್ವಾಮಿ, ಯೋಗಾನಂದ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.







